ಕರ್ನಾಟಕ

karnataka

ETV Bharat / state

ಲಾಕ್​​ಡೌನ್​​ ಬಳಿಕ ಆಸ್ಪತ್ರೆಗೆ ಬೀಗ, ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಆಸ್ಪತ್ರೆ - ಆಲೂರು ತಾಲೂಕಿನ ಧರ್ಮಾಪುರಿ

ಹೇಮಾವತಿ ಡ್ಯಾಂ ಮುಳುಗಡೆಯಾದ ಸಂದರ್ಭ ಪುನರ್ವಸತಿ ಕೇಂದ್ರವನ್ನಾಗಿ ಆಲೂರು ತಾಲೂಕಿನ ಧರ್ಮಾಪುರಿಯ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಲ್ಲಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲೆಂದು 18 ವರ್ಷಗಳ ಹಿಂದೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡುವ ಜೊತೆಗೆ ಸರ್ಕಾರದ ಆದೇಶದನ್ವಯ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು.

darmapuri-govrnment-hospital-close-to-corona-effect-news
ಲಾಕ್​​ಡೌನ್​​ ಬಳಿಕ ಆಸ್ಪತ್ರೆಗೆ ಬೀಗ

By

Published : Dec 20, 2020, 7:20 PM IST

ಹಾಸನ: ದಶಕಗಳಿಂದ ಈ ಗ್ರಾಮದ ಸುತ್ತಮುತ್ತಲಿನ ಭಾಗದ ಜನರು ಇದೇ ಆಸ್ಪತ್ರೆಯನ್ನು ನಂಬಿಕೊಂಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಬಳಿಕ ಆಸ್ಪತ್ರೆಗೆ ಬಿದ್ದ ಬೀಗವನ್ನು ಇನ್ನೂ ತೆರೆದಿಲ್ಲ. ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೆ ಈಗ ಅನಾರೋಗ್ಯ ಬಾಧಿಸಿದೆ.

ಆಸ್ಪತ್ರೆಯ ದುಸ್ಥಿತಿ

ಹಾಸನ ಜಿಲ್ಲೆ ಆಲೂರು ತಾಲೂಕಿನ ಧರ್ಮಪುರಿ ಗ್ರಾಮದ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿ ದಶಕಗಳು ಕಳೆದಿರಬಹುದು ಅಷ್ಟೇ. ಹೇಮಾವತಿ ಡ್ಯಾಂ ಮುಳುಗಡೆಯಾದ ಸಂದರ್ಭ ಪುನರ್ವಸತಿ ಕೇಂದ್ರವನ್ನಾಗಿ ಆಲೂರು ತಾಲೂಕಿನ ಧರ್ಮಾಪುರಿಯ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಲ್ಲಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲೆಂದು 18 ವರ್ಷಗಳ ಹಿಂದೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡುವ ಜೊತೆಗೆ ಸರ್ಕಾರದ ಆದೇಶದನ್ವಯ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು.ಅಂದಿನಿಂದ ರಾಯಸಮುದ್ರ, ತಿಮ್ಮನಹಳ್ಳಿ, ಪಟ್ಟಣ, ಮುತ್ತಿಗೆ, ತುರುವನಹಳ್ಳಿ, ಮಂಟಿಕೊಪ್ಪಲು, ಮಲ್ಲೇಶಪುರ, ಕರಿಗೌಡನಹಳ್ಳಿ, ಚಾಕನಹಳ್ಳಿ, ಹಸಗನೂರು ಸೇರಿದಂತೆ ಸುತ್ತಮುತ್ತಲ ಜನರು ಇದೇ ಆಸ್ಪತ್ರೆಯನ್ನು ನಂಬಿಕೊಂಡಿದ್ದರು. ರೋಗಿಗಳಿಗೆ ವೈದ್ಯರುಗಳಿಂದ ಉತ್ತಮ ಚಿಕಿತ್ಸೆಯೂ ದೊರಕುತ್ತಿತ್ತು.

ಓದಿ: ವಿಲೀನದಂತಹ ಅವಿವೇಕತನ ಪ್ರದರ್ಶನ ಜೆಡಿಎಸ್​​​ ಮಾಡುವುದಿಲ್ಲ: ಹೆಚ್​.ಡಿ.ಕುಮಾರಸ್ವಾಮಿ

ಆದರೆ, ಮಾರ್ಚ್​ನಲ್ಲಿ ಹೆಮ್ಮಾರಿ ಕೊರೊನಾದಿಂದ ಆಸ್ಪತ್ರೆಗೆ ಬೀಗ ಬಿದ್ದಿದೆ. ಆಸ್ಪತ್ರೆಯ ಕಡೆ, ರೋಗಿಗಳು ಮುಖ ಮಾಡದ ಹಿನ್ನೆಲೆ ಕಟ್ಟಡದ ಸುತ್ತಲೂ ಗಿಡ-ಗಂಟೆಗಳು ಬೆಳೆದು ವಿಷಕಾರಕ ಜೀವಿಗಳ ತಾಣವಾಗಿದೆ. ಕೆಲವು ಪುಂಡರು ಮದ್ಯಪಾನ ಮಾಡಲು ಇದೇ ಆಸ್ಪತ್ರೆಯ ಆವರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೇಟ್, ಸಿಗರೇಟ್ ಮತ್ತು ತಂಬಾಕು ವಸ್ತುಗಳೇ ಅನೈತಿಕ ತಾಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಬ್ಬರೇ ವೈದ್ಯರಿದ್ದು, ಅವರೂ ಪೊಲಿಯೋ ಲಸಿಕೆ ಹಾಕೋಕೆ ಬರುವುದು ಬಿಟ್ಟರೆ ಇತ್ತ ಮುಖ ಮಾಡುವುದಿಲ್ಲ. ಸುಸಜ್ಜಿತ ಕಟ್ಟಡವಿದ್ದರೂ ನಿರ್ವಹಣೆ ಕೊರತೆ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಗ್ರಾಮದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ABOUT THE AUTHOR

...view details