ಸಕಲೇಶಪುರ:ತಾಲೂಕಿನ ಕೆಲವಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ಎಂ ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಪುತ್ರಿ ಕೆ.ಜೆ. ಜಾಗೃತಿ, ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ್ಯಾಂಕ್ ಗಳಿಸಿದ್ದಾರೆ.
ಸಕಲೇಶಪುರ: ಕಾಫಿ ಬೆಳೆಗಾರನ ಮಗಳು ರಾಜ್ಯಕ್ಕೆ 6ನೇ ರ್ಯಾಂಕ್ - Hassan District News
ಸಕಲೇಶಪುರದ ಕೆಲವಳ್ಳಿ ಗ್ರಾಮದ ಕಾಫಿ ಬೆಳೆಗಾರ ಕೆ.ಎಂ ಜಗದೀಶ್ ಹಾಗೂ ಕೆ.ಜೆ. ಮೀನಾಕ್ಷಿ ಅವರ ಮಗಳು ಕೆ.ಜೆ. ಜಾಗೃತಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಬಂದಿದ್ದಾರೆ.
![ಸಕಲೇಶಪುರ: ಕಾಫಿ ಬೆಳೆಗಾರನ ಮಗಳು ರಾಜ್ಯಕ್ಕೆ 6ನೇ ರ್ಯಾಂಕ್ Daughter of Coffee Grower State 6th Rank](https://etvbharatimages.akamaized.net/etvbharat/prod-images/768-512-8046313-766-8046313-1594883564676.jpg)
ಕೆ.ಜೆ.ಜಾಗೃತಿಗೆ ಸಿಹಿ ತಿನಿಸುತ್ತಿರುವ ಪೋಷಕರು
ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಕೆ.ಜೆ. ಜಾಗೃತಿ
ಉಡುಪಿ ಜಿಲ್ಲೆ ಕಾರ್ಕಳದ ಜ್ಞಾನಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಶೇ.98.5 ಫಲಿತಾಂಶ ಪಡೆದಿದ್ದಾರೆ. ಈ ಸಾಧನೆ ಕುರಿತು ಮಾತನಾಡಿರುವ ಜಾಗೃತಿ, ಪರೀಕ್ಷೆಗೆ ಆತಂಕದಿಂದ ಓದುವುದು ಬೇಡ. ಸಾಮಾನ್ಯವಾಗಿ ಓದಿದರೆ ಉತ್ತಮ ಅಂಕ ಪಡೆಯಲು ಸಾಧ್ಯ ಎಂದರು.