ಕರ್ನಾಟಕ

karnataka

ETV Bharat / state

ಸತತ ಮಳೆಗೆ ಜಲಾವೃತಗೊಂಡ ಬೆಳೆ: ಲಕ್ಷಾಂತರ ರೂಪಾಯಿ ಹಾನಿ - Crops destroyed due to continuous rainfall

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಸತತ ಮಳಯಿಂದಾಗಿ ಫಸಲಿಗೆ ಬಂದ ಕಾಫಿ, ಭತ್ತದ ಬೆಳೆ ನಾಶವಾಗಿದೆ. ಕೂಡಲೇ ಸರ್ಕಾರ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

Crops destroyed due to continuous rainfall
ಸತತ ಮಳೆಗೆ ಜಲಾವೃತಗೊಂಡ ಬೆಳೆ

By

Published : Aug 9, 2020, 12:05 AM IST

ಹಾಸನ: ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಫಸಲಿಗೆ ಬಂದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಸತತ ಮಳೆಗೆ ಜಲಾವೃತಗೊಂಡ ಬೆಳೆ

ಬೇಲೂರು ತಾಲೂಕು ಅರೆಹಳ್ಳಿ ಹೋಬಳಿಯ ವಾಟೆಹಳ್ಳಿ ನಿವಾಸಿ ಚಂದ್ರಶೇಖರ್ ಎಂಬುವರು ತಮ್ಮ ಒಂದು ಎಕರೆ ಭೂಮಿಯಲ್ಲಿ ಕಾಫಿ ಗಿಡ ಹಾಕಿದ್ದರು. ಆದರೆ, ಮಳೆಗೆ ಕಾಫಿ ಗಿಡದ ಕೆಳಗೆ ನೀರು ತುಂಬಿಕೊಂಡಿದ್ದು, ಕೆಲ ಗಿಡಗಳು ಕೊಚ್ಚಿ ಹೋಗಿವೆ.

ಭತ್ತ ನಾಟಿ ಮಾಡಿದ್ದ ರೈತರ ಗದ್ದೆಗಳು ಕೆರೆಗಳಾಗಿವೆ. ಇಬ್ಬರು ರೈತರಿಗೆ ಅಂದಾಜು 4 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದರು.

ಸರ್ಕಾರಿ ಭೂಮಿಯಲ್ಲಿರುವ ಕೆರೆಯ ಕೋಡಿ ಒಡೆದು, ನಮ್ಮ ಹೊಲ ಮತ್ತು ಗದ್ದೆ ಪೂರ್ಣ ಜಲಾವೃತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನ್ಯಾಯ ದೊರಕಿಸಬೇಕು ಎಂದು ರೈತ ಗುಂಡ ಅರಸ್ ವಿನಂತಿಸಿಕೊಂಡರು.

ABOUT THE AUTHOR

...view details