ಕರ್ನಾಟಕ

karnataka

ಕೊರೊನಾ ಭೀತಿ: ಒಂದು ತಿಂಗಳು ಅಂಗಡಿ ಬಂದ್ ಮಾಡಲು ಕ್ಷೌರಿಕರು ನಿರ್ಧಾರ!

By

Published : Jul 13, 2020, 9:18 PM IST

ಜಿಲ್ಲೆಯಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೌರಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್​ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ತಾಲೂಕಿನ ಎಲ್ಲ ಕ್ಷೌರಿಕರು ಕಡ್ಡಾಯವಾಗಿ ಈ ನಿಯಮ ಪಾಲಿಸುವಂತೆ ಸೂಚಿಸಿದ್ದು, ಹಣದಾಸೆಗೊಳಗಾಗಿ ಅಂಗಡಿ ತೆರೆಯಬೇಡಿ ಎಂದಿದ್ದಾರೆ.

Corona Panic: salon shop owners decided To close Shop for a Month
ಕೊರೊನಾ ಭೀತಿ: ಒಂದು ತಿಂಗಳು ಅಂಗಡಿ ಬಂದ್ ಮಾಡಲು ಕ್ಷೌರಿಕರ ನಿರ್ಧಾರ

ಸಕಲೇಶಪುರ (ಹಾಸನ):ತಾಲೂಕಿನಾದ್ಯಾಂತ ಮುಂದಿನ ಆಗಸ್ಟ್ 18ರವರೆಗೆ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರ-ಸಾವಿರ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದೆ. ಗ್ರೀನ್ ಝೋನ್​​ ಇದ್ದ ತಾಲೂಕು ಇದಕ್ಕೆ ಹೊರತಾಗಿಲ್ಲ. ಸಮುದಾಯಕ್ಕೂ ಕೊರನಾ ಅಂಟುವ ಭೀತಿ ಹೆಚ್ಚಾಗುತ್ತಿರುವ ಕಾರಣ ಸಾಮಾಜಿಕ ಜವಾಬ್ದಾರಿಯನ್ನರಿತು ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಕೊರೊನಾ ಭೀತಿ: ಒಂದು ತಿಂಗಳು ಅಂಗಡಿ ಬಂದ್ ಮಾಡಲು ಕ್ಷೌರಿಕರ ನಿರ್ಧಾರ

ಕ್ಷೌರಿಕರು ಸಹ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹಣದ ಆಸೆಗಾಗಿ ಕದ್ದು-ಮುಚ್ಚಿ ಕಟಿಂಗ್ ಮಾಡುವುದು ಬೇಡ. ಆರೋಗ್ಯ ಹದಗೆಟ್ಟರೆ ಕುಟುಂಬ ಬೀದಿಗೆ ಬೀಳುತ್ತದೆ ಈ ಕುರಿತು ಕ್ಷೌರಿಕರು ಎಚ್ಚರ ವಹಿಸಬೇಕು. ಸರ್ಕಾರ ಕ್ಷೌರಿಕರಿಗೆ ಘೋಷಣೆ ಮಾಡಿರುವ 5,000 ರೂಪಾಯಿ ಇನ್ನು ಸರಿಯಾಗಿ ಸಿಕ್ಕಿಲ್ಲ, ಕನಿಷ್ಠ ಕಾರ್ಮಿಕ ಇಲಾಖೆ ವತಿಯಿಂದ ಆಹಾರದ ಕಿಟ್​​​​ಗಳನ್ನು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಶ್ಯಾಮ್, ಆನಂದ್, ಜಗಣ್ಣ, ಚೆಲುವಮೂರ್ತಿ ಹಾಜರಿದ್ದರು.

ABOUT THE AUTHOR

...view details