ಕರ್ನಾಟಕ

karnataka

ETV Bharat / state

ಶಾಸಕ ಶಿವಲಿಂಗೇಗೌಡ ವಿರುದ್ಧ ಕಾನೂನು ಹೋರಾಟ: ಎನ್.ಆರ್. ಸಂತೋಷ್

ಜೆಡಿಎಸ್ ಪಕ್ಷದ ಏಳು ಸದಸ್ಯರು ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಶಾಸಕ ಶಿವಲಿಂಗೇಗೌಡರು ತಮ್ಮ ಹುಳುಕು, ದೌರ್ಬಲ್ಯ ಮುಚ್ಚಿಕೊಳ್ಳಲು ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆರೋಪಿಸಿದ್ದಾರೆ.

By

Published : Jul 6, 2021, 7:22 AM IST

Hassan
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್

ಹಾಸನ:ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಅರಸೀಕೆರೆ ನಗರಸಭಾ ಸದಸ್ಯರಿಗೆ ಹಣದ ಆಮಿಷವೊಡ್ಡಿ ನಗದು ನೀಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ನನ್ನ ಹೆಸರನ್ನು ಪ್ರಸ್ತಾಪಿಸಿರುವ ಶಾಸಕ ಶಿವಲಿಂಗೇಗೌಡ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿದ್ದಾರೆ.

ತಮ್ಮ ಹುಳುಕು, ದೌರ್ಬಲ್ಯ ಮುಚ್ಚಿಕೊಳ್ಳಲು ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಎನ್.ಆರ್ ಸಂತೋಷ್

ನಗರದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಏಳು ಸದಸ್ಯರು ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ಎಂಬುವರಿಗೆ 10 ಲಕ್ಷ ರೂ. ನೀಡಿದ್ದೇನೆ ಎಂಬ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಶಾಸಕ ಶಿವಲಿಂಗೇಗೌಡರು ತಮ್ಮ ಹುಳುಕು, ದೌರ್ಬಲ್ಯ ಮುಚ್ಚಿಕೊಳ್ಳಲು ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಶಿವಲಿಂಗೇಗೌಡರು ನಗರಸಭೆ ಸದಸ್ಯರ ಸಭೆ ಕರೆದು ಯಾವುದೇ ಕಾರಣಕ್ಕೂ ಅಧ್ಯಕ್ಷರಿಗೆ ಸಹಕಾರ ಕೊಡಬೇಡಿ. ನಗರಸಭೆ ಹೇಗೆ ನಡೆಯುತ್ತದೆ, ನಾನು ನೋಡ್ತಿನಿ ಅಂತ ಹೇಳಿದ್ರು. ನಂತರ ಅವರ ಪರಮಾಪ್ತ ಅರಸೀಕೆರೆಯ ಎಲ್ಲಾ ಯೊಜನೆಗಳಲ್ಲಿ ಮೂಗು ತೂರಿಸುತ್ತಿರುವ ಕಾರಣಕ್ಕೆ ಹಾಗೂ ಶಿವಲಿಂಗೇಗೌಡರ ವರ್ತನೆಯಿಂದ ಬೇಸತ್ತು ನಗರಸಭೆ ಸದಸ್ಯರು ನಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಪತ್ರ ನೀಡಿದ್ದಾರೆ ಎಂದರು.

ಕ್ಷೇತ್ರದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸುಳ್ಳು ಹೇಳುವುದು ನಿಮಗೆ ಶೋಭೆ ತರುವ ಸಂಗತಿಯಲ್ಲ. ದಯವಿಟ್ಟು ಇನ್ನಾದರೂ ಇಂತಹ ಕೆಲಸಗಳನ್ನು ನಿಲ್ಲಿಸಿ. ಜನರು ನಗೆಪಾಟಲಿಗೀಡಾಗುವುದು ಬೇಡ ಎಂದು ಸಂತೋಷ್​ ಹೇಳಿದ್ರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣನಲ್ಲ. ಅದಕ್ಕೂ ನನಗೂ ಸಂಬಂಧ ಇಲ್ಲ. ಸಿಎಂ ಯಡಿಯೂರಪ್ಪ ಅವರನ್ನು ನಾನೇಕೆ ಬ್ಲ್ಯಾಕ್​ಮೇಲ್​ ಮಾಡಲಿ. ಇಂತಹ ಹೇಳಿಕೆಯನ್ನು ಮಾಜಿ ಸಚಿವರಾದ ಹೆಚ್​​​​​​​​​​​​​​​​​.ಡಿ. ರೇವಣ್ಣ ಹೇಳ್ತಾರೆ ಎಂದರೆ ಇದು ಬಾಲಿಶ ಹೇಳಿಕೆ ಎಂದು ರೇವಣ್ಣ ವಿರುದ್ಧವೂ ಸಂತೋಷ್​ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಅರಸೀಕೆರೆಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಪಕ್ಷದ ಹೈಕಮಾಂಡ್​ಗೆ ಬಿಟ್ಟ ವಿಚಾರ. ಹೈಕಮಾಂಡ್ ಸ್ಪರ್ಧೆ ಮಾಡಿ ಎಂದರೆ ನಾನು ಕಣ್ಣು ಮುಚ್ಚಿಕೊಂಡು ಸ್ಪರ್ಧೆ ಮಾಡುತ್ತೇನೆ. ಬಿಜೆಪಿ ಸಂಘಟನೆ ಮಾಡುವುದನ್ನು ನಾನು ಎಂದೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಇತ್ತ ಮೇಕೆದಾಟು ಯೋಜನೆಗೆ ಅಡ್ಡಿ: ಅತ್ತ ರಾಜ್ಯದ ಸಮ್ಮತಿ ಇಲ್ಲದೆ ಮೂರು ಯೋಜನೆಗಳಿಗೆ ಕೈ ಹಾಕಿದ ತಮಿಳುನಾಡು!

ABOUT THE AUTHOR

...view details