ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮತ್ತೆ ವರುಣಾರ್ಭಟ: ಜನಜೀವನ ಅಸ್ತವ್ಯಸ್ತ - ಜನಜೀವನ ಅಸ್ತವ್ಯಸ್ತ

ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಭಾರಿ ಮಳೆಯಾಗಿ ಹಲವಾರು ಅನಾಹುತಗಳು ಸಂಭವಿಸಿದ್ದವು. ನಂತರ ಮಳೆ ನಿಧಾನವಾಗಿ ಕಣ್ಮರೆಯಾಗಿತ್ತು. ಆದ್ರೀಗ ಹಾಸನ ಜಿಲ್ಲೆಯಲ್ಲಿ ನಾಲ್ಕು ದಿನದಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಮಧ್ಯಾಹ್ನದಿಂದ ಮತ್ತೆ ಆಗಮಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಹಾಸನದಲ್ಲಿ ಮತ್ತೆ ವರುಣಾರ್ಭಟ; ಜನಜೀವನ ಅಸ್ತವ್ಯಸ್ತ

By

Published : Aug 18, 2019, 11:33 PM IST

ಹಾಸನ:ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಮಧ್ಯಾಹ್ನದ ವೇಳೆಗೆ ಮತ್ತೆ ಆಗಮಿಸಿದ್ದಾನೆ. ಎಡೆಬಿಡದೆ ಸಕಲೇಶಪುರ-ಆಲೂರು, ಬೇಲೂರು, ಹಾಸನ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮತ್ತೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಹಾಸನದಲ್ಲಿ ಮತ್ತೆ ವರುಣಾರ್ಭಟ: ಜನಜೀವನ ಅಸ್ತವ್ಯಸ್ತ

ಕೇರಳ ಹಾಗೂ ಪಕ್ಕದ ಕೊಡಗಿನಲ್ಲಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲೂ ವರುಣನ ಆಗಮನವಾಗಿದೆ. ಮೋಡ ಕವಿದ ವಾತಾವರಣದಿಂದ ಅತಿ ಹೆಚ್ಚು ಮಳೆ ಬರುವ ಸೂಚನೆಯಿದೆ. ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಮಳೆ ಬಾರದೆ ನಿರಾಸೆ ಮೂಡಿಸಿದೆ.

ಜಿಲ್ಲೆಯಲ್ಲಿ ಮಳೆರಾಯನ ಅವಕೃಪೆಯಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ತುಸು ಚಳಿ ಜನತೆಯನ್ನು ಸ್ವೇಟರ್, ಜರ್ಕಿನ್ ಮೊರೆ ಹೋಗುವಂತೆ ಮಾಡಿದೆ.

ABOUT THE AUTHOR

...view details