ಕರ್ನಾಟಕ

karnataka

ETV Bharat / state

ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ - ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ

ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಬಿಸಾಡದಂತೆ ಜಾಗೃತಿ ಮೂಡಿಸಲು ಫೀಲ್ಡ್​ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

ಎಬಿವಿಪಿಯಿಂದ ಸ್ವಚ್ಚತಾ ಕಾರ್ಯ

By

Published : Sep 30, 2019, 10:59 AM IST

ಹಾಸನ:ನಗರದ ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ (ಎಬಿವಿಪಿ) ವಿದ್ಯಾರ್ಥಿ ಪರಿಷತ್​ ಭಾನುವಾರ ಬೆಳಗ್ಗೆ ಸ್ವಚ್ಛತೆ ಕಾರ್ಯಕ್ರಮ ನಡೆಸಿದೆ.

ಫೀಲ್ಡ್ ಮಾರ್ಷಲ್​ ಕಾರಿಯಪ್ಪ ಉದ್ಯಾನವನದಲ್ಲಿ ಎಬಿವಿಪಿಯಿಂದ ಸ್ವಚ್ಛತಾ ಕಾರ್ಯ

ಪ್ಲಾಸ್ಟಿಕ್ ಫ್ರೀ ಇಂಡಿಯಾ ಎಂಬುದನ್ನು ಮಾಡಿದ್ದರೂ ಈ ಪಾರ್ಕಿನಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದನ್ನೆಲ್ಲಾ ಒಂದು ಕಡೆ ಸಂಗ್ರಹಿಸಿ, ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿ ಪರಿಷತ್​ ಈ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ. ಅಲ್ಲದೇ ಎಬಿವಿಪಿ ಕಡೆಯಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್​ ಫ್ರೀ ಕ್ಯಾಂಪೇನ್​​ ಅನ್ನು ಮಾಡುವುದಾಗಿ ವಿದ್ಯಾರ್ಥಿ ಪರಿಷತ್​​ನ ಸಂಘಟನಾ ಕಾರ್ಯದರ್ಶಿ ಬೊಮ್ಮಣ್ಣ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರಾದ ಭರತ್, ಮನು, ಸಂಪತ್​ ಚವನ್, ನವೀನ್ ಕುಮಾರ್, ಭಾನುಪ್ರಕಾಶ್, ದರ್ಶನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ABOUT THE AUTHOR

...view details