ಹಾಸನ/ಚನ್ನರಾಯಪಟ್ಟಣ: ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿ ಹಾಗೂ ಮಗುವಿಗೆ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಶ್ರೀವರಾಂಪುರ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶಿವಪುರ ಗ್ರಾಮದ ಆನಂದ್ ಮತ್ತು ಜ್ಯೋತಿ ದಂಪತಿಯ ಮಗಳಾದ ಸೌಂದರ್ಯ ಎಂಬುವರನ್ನು ತಾಲೂಕಿನ ಶ್ರೀವರಾಂಪುರ ಗ್ರಾಮದ ಗೋವಿಂದಯ್ಯ ಪುತ್ರ ರಂಗನಾಥನಿಗೆ ಸಂಪ್ರದಾಯಬದ್ಧವಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಂಗನಾಥ ಸೌಂದರ್ಯಳಿಗೆ ಊಟ - ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.