ಕರ್ನಾಟಕ

karnataka

ETV Bharat / state

ಬೆಂಗಳೂರಿನಿಂದ ಹಾಸನಕ್ಕೆ ಬಂದ 90 ಮಂದಿ.. ತಪಾಸಣೆ ಬಳಿಕ ಗೃಹ ಬಂಧನದಲ್ಲಿಡಲು ನಿರ್ಧಾರ..

ಚಿಕ್ಕಬಳ್ಳಾಪುರದಲ್ಲಿ ಈ ಮೊದಲು ಕೊರೊನಾ ಪ್ರಕರಣಗಳಿದ್ದವು. ಈಗ ಅದೇ ಭಾಗದ ಕಡೆಯಿಂದ ಬಂದಂತಹ ಪ್ರಯಾಣಿಕರಾಗಿರುವುದರಿಂದ ಪೊಲೀಸರು ಅನುಮಾನ ವ್ಯಕ್ತಪಡಿಸಿದರು.

By

Published : May 3, 2020, 11:32 AM IST

dw
ಬೆಂಗಳೂರಿನಿಂದ ಹಾಸನಕ್ಕೆ ಬಂದ 90 ಮಂದಿ

ಹಾಸನ :ಲಾಕ್‌ಡೌನ್‌ ನಿಯಮಗಳಲ್ಲಿಕೆಲ ಸಡಿಲಿಕೆ ಮಾಡಿರೋ ಹಿನ್ನೆಲೆ ಬೆಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಜಿಲ್ಲೆಗೆ ಬಂದಂತಹ 90 ಮಂದಿಯನ್ನು ತಪಾಸಣೆಗೊಳಪಡಿಸಿ ಗೃಹಬಂಧನಕ್ಕಿರಿಸಲಾಗುತ್ತಿದೆ.

ಬೆಂಗಳೂರಿನಿಂದ ಹಾಸನಕ್ಕೆ ಬಂದ 90 ಮಂದಿಗೆ ಗೃಹಬಂಧನ..

ಈಗಾಗಲೇ ಬೇರೆಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಸ್ವಂತ ಜಿಲ್ಲೆಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಅದರಂತೆ ಬೆಂಗಳೂರಿನಿಂದ ಜಿಲ್ಲೆಗೆ 3 ಕೆಎಸ್ಆರ್​ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಗಿದೆ. ಹಾಸನ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಬಸ್​ಗಳನ್ನು ತೀವ್ರ ತಪಾಸಣೆ ನಡೆಸಿದರು. ಪ್ರಯಾಣಿಕರನ್ನು ಸರ್ಕಾರಿ ಆಸ್ಪತ್ರೆಯ ಸಮೀಪ ಇಳಿಸಿದ್ದು ಆತಂಕಕ್ಕೆ ಎಡೆಮಾಡಿದೆ.

ಚಿಕ್ಕಬಳ್ಳಾಪುರದಲ್ಲಿ ಈ ಮೊದಲು ಕೊರೊನಾ ಪ್ರಕರಣಗಳಿದ್ದವು. ಈಗ ಅದೇ ಭಾಗದ ಕಡೆಯಿಂದ ಬಂದಂತಹ ಪ್ರಯಾಣಿಕರಾಗಿರುವುದರಿಂದ ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಕೆಲಕಾಲ ಚೆಕ್​ಪೋಸ್ಟ್​ ಬಳಿಯಲ್ಲಿ ಬಸ್​ಗಳನ್ನು ನಿಲ್ಲಿಸಿ ಪ್ರತಿ ಪ್ರಯಾಣಿಕರ ವಿಳಾಸವನ್ನು ಪಡೆದು ನಂತರ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ ಗೃಹಬಂಧನಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details