ಕರ್ನಾಟಕ

karnataka

ETV Bharat / state

ಗದಗ ಬಸ್ ನಿಲ್ದಾಣ ಉದ್ಘಾಟನೆಗೆ ಕಲ್ಲಯ್ಯಜ್ಜ, ತೋಂಟದ ಶ್ರೀಗಳಿಗಿಲ್ಲ ಆಹ್ವಾನ: ಭಕ್ತ ಸಮೂಹ ಬೇಸರ - ಗದಗ ಲೇಟೆಸ್ಟ್​ ನ್ಯೂಸ್

ಇಂದು ಸಂಜೆ ಗದಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಸ್​ ನಿಲ್ದಾಣವನ್ನು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಉದ್ಘಾಟಿಸಲಿದ್ದಾರೆ. ಆದರೆ ಸಮಾರಂಭಕ್ಕೆ ಕಲ್ಲಯ್ಯಜ್ಜನವರು ಮತ್ತು ತೋಂಟದ ಶ್ರೀಗಳನ್ನು ಆಹ್ವಾನಿಸದೆ ಇರುವುದು ಜನತೆಯ ಬೇಸರಕ್ಕೆ ಕಾರಣವಾಗಿದೆ.

ಗದಗ ಬಸ್ ನಿಲ್ದಾಣ
Gadag Bus stand

By

Published : Jan 24, 2021, 12:02 PM IST

ಗದಗ: ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನವೀಕೃತ ಬಸ್ ನಿಲ್ದಾಣವನ್ನು ಇಂದು ಸಂಜೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಉದ್ಘಾಟಿಸಲಿದ್ದಾರೆ. ಆದರೆ ಸಮಾರಂಭಕ್ಕೆ ಕಲ್ಲಯ್ಯಜ್ಜನವರು ಮತ್ತು ತೋಂಟದ ಶ್ರೀಗಳನ್ನು ಆಹ್ವಾನಿಸದೇ ಇರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.

ಆಹ್ವಾನ ಪತ್ರಿಕೆ

ನಗರದಲ್ಲಿ ಬಸ್​ ನಿಲ್ದಾಣವನ್ನು ನಿರ್ಮಾಣ ಮಾಡಿ ಸುಮಾರು ವರ್ಷಗಳೇ ಕಳೆದಿದ್ದು, ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರನ್ನು ಇಡಲಾಗಿದೆ. ನಿರಂತರ ಹೋರಾಟದ ಫಲವಾಗಿ ಇಂದು ಬಸ್​ ನಿಲ್ದಾಣ ಉದ್ಘಾಟನೆಗೊಳ್ಳುತ್ತಿರುವುದು ಹಲವು ಸಂಘಟನೆಗಳಿಗೆ ಸಂತಸ ತಂದಿದೆ.

ಓದಿ: ಎಫ್​​​ಡಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಬಂಧಿತರ ಸಂಖ್ಯೆ 14ಕ್ಕೆ ಏರಿಕೆ

ಬಸ್​ ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ತೋಂಟದಾರ್ಯ ಮಠದ ಸಿದ್ದರಾಮ ಮಹಾಸ್ವಾಮೀಜಿಗಳಿಗೆ ಜಿಲ್ಲಾಡಳಿತ ಆಹ್ವಾನ ನೀಡಿಲ್ಲ. ಸ್ವಾಮೀಜಿಗಳನ್ನು ಸಮಾರಂಭಕ್ಕೆ ಕರೆಯದೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ ಎಂದು ಉಭಯ ಮಠಗಳ ಭಕ್ತರು ಆಕ್ರೋಶ ವ್ಯಕ್ತಪಡಿಸಿರುವ ಪೋಸ್ಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪುಟ್ಟಯ್ಯಜ್ಜನವರ ಬಸ್ ನಿಲ್ದಾಣ ಲೋಕಾರ್ಪಣೆಗೆ ಅದೇ ಮಠದ ಪೀಠಾಧಿಪತಿಗಳನ್ನು ಆಹ್ವಾನಿಸದಿರುವುದು ಎಷ್ಟು ಸರಿ ಎಂದು ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details