ಗದಗ:ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಣಕೊಪ್ಪ, ನಾಗರಾಳ ಗ್ರಾಮದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಮಾರುಕಟ್ಟೆಗೆ ಸಾಗಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಎಫೆಕ್ಟ್: ಕ್ಯಾರೆಟ್ ಬೆಳೆಗಾರರಿಗೆ 'ಕ್ಯಾ ರೇಟ್' ಅಂತ ಕೇಳೋರೇ ಇಲ್ಲ - ಕ್ಯಾರೇಟ್ ಬೆಳೆ ನಷ್ಟ
ಗದಗದ ಬೆಣಕೊಪ್ಪ, ನಾಗರಾಳ ಗ್ರಾಮದಲ್ಲಿ ರೈತರು ಬೆಳೆದ ಕ್ಯಾರೆಟ್ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ಬೆಳೆಯನ್ನು ಜಮೀನಿನಲ್ಲೇ ಬಿಡುತ್ತಿದ್ದಾರೆ.
![ಕೊರೊನಾ ಎಫೆಕ್ಟ್: ಕ್ಯಾರೆಟ್ ಬೆಳೆಗಾರರಿಗೆ 'ಕ್ಯಾ ರೇಟ್' ಅಂತ ಕೇಳೋರೇ ಇಲ್ಲ spoiled-carrot-crop-in-gadag](https://etvbharatimages.akamaized.net/etvbharat/prod-images/768-512-6876506-1037-6876506-1587442940275.jpg)
ಒಂದೂವರೆ ಎಕರೆ ಜಮೀನಿನಲ್ಲಿ ಗಜ್ಜರಿ ಬೆಳೆದಿದ್ದು, ಅದಕ್ಕೆ ಸುಮಾರು ₹ 80 ಸಾವಿರ ಖರ್ಚು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗೆ ವ್ಯಯಿಸಿದ್ದ ಖರ್ಚು ಸಹ ಸಿಗದಾಗಿದೆ ಎಂದು ಬೆಣಕೊಪ್ಪ ಗ್ರಾಮದ ರೈತ ಪ್ರಕಾಶ್ ಬಿಂಗಿ ಅಳಲು ತೋಡಿಕೊಂಡರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗಜ್ಜರಿಗೆ (ಕ್ಯಾರೇಟ್) ಕೇವಲ ₹ 300-400ಕ್ಕೆ ಕೇಳುತ್ತಾರೆ. ಲಾಕ್ಡೌನ್ ಇಲ್ಲದಿದ್ದರೆ, ಕ್ವಿಂಟಾಲ್ ₹ 3000-4000 ಇರುತ್ತಿತ್ತು. ಸುಮಾರು ₹ 2 ಲಕ್ಷವರೆಗೂ ಲಾಭ ಬರುತಿತ್ತು. ಆದರೆ, ಈಗ ಬಂದ ಬೆಳೆ ದಲ್ಲಾಳಿಗಳಿಗೆ, ವ್ಯಾಪಾರಿಗಳಿಗೆ ಲಾಭ ತಂದುಕೊಡುತ್ತಿದೆ. ಹೀಗಾಗಿ ನಾವು ನಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ರೈತ ಪ್ರಕಾಶ್ ಬಿಂಗಿ.