ಕರ್ನಾಟಕ

karnataka

ETV Bharat / state

ಭಯಾನಕ ಆಚರಣೆಗಳ ವಿಶಿಷ್ಟ ಏಳು ಕೋಟಿ ಮೈಲಾರಲಿಂಗನ‌ ಜಾತ್ರೆ! - ಏಳು ಕೋಟಿ ಮೈಲಾರಲಿಂಗಪ್ಪನ ದೇವಸ್ಥಾನ

ದಸರಾ ಅಂಗವಾಗಿ ಗದಗದಲ್ಲಿ ನಡೆಯುತ್ತೆ ವಿಶೇಷ ಪವಾಡಗಳ ಜಾತ್ರೆ. ಮೈಲಾರಲಿಂಗನ‌ ಜಾತ್ರೆಯಲ್ಲಿ ಶಸ್ತ್ರ ಚುಚ್ಚಿಕೊಂಡು ನಾಡಿನಲ್ಲೆಡೆ ಮಳೆ,ಬೆಳೆ ಸಮೃದ್ಧಿಯಾಗಲಿ ಅಂತ ಭಕ್ತರು ಬೇಡಿಕೊಳ್ತಾರೆ.

special-dessehra-festival-celebrate-in-gadag

By

Published : Oct 8, 2019, 10:48 PM IST

Updated : Oct 8, 2019, 11:59 PM IST

ಗದಗ:ದಸರಾ ಅಂದ್ರೆ ಥಟ್ ಅಂತಾ ನೆನಪಾಗೋದು ಜಂಬೂ ಸವಾರಿ. ಆದ್ರೆ, ಅಲ್ಲೊಂದು ಗ್ರಾಮದಲ್ಲಿ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಗ್ತಿದೆ. ಅಲ್ಲಿ ಒಂದೆಡೆ ಭಕ್ತಿಯ ಉನ್ಮಾದದಲ್ಲಿ ಭಕ್ತರು ಹೆಜ್ಜೆ ಹಾಕುತ್ತಿದ್ದರೆ, ಢಮರುಗದ ನಾದದೊಂದಿಗೆ ದೇವಸ್ಥಾನದ ಅಂಗಳದಲ್ಲಿ ಆಸ್ತಿಕರು ಸುತ್ತು ಹಾಕುತ್ತಾರೆ. ಇಷ್ಟೇನಾ ವಿಶೇಷ? ಅಂದ್ರೆ ಖಂಡಿತಾ ಅಲ್ಲ!

ಗದಗದ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ 33ವರ್ಷದ ಹಿಂದೆಯೇ ಮೈಲಾರಲಿಂಗೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮಳೆಯ ಅಭಾವ ಉಂಟಾಗಿ, ತೀವ್ರ ಬರಗಾಲ ಎದುರಾಗಿರೋದ್ರಿಂದ ಕಳೆದೊಂದು ದಶಕದಿಂದ ದಸರಾ ಹಬ್ಬವನ್ನು ಇಲ್ಲಿ ವಿಶಿಷ್ಟವಾಗಿ ಆಚರಿಸಲಾಗ್ತಿದೆ. ಈ ಬಾರಿ ಪ್ರವಾಹ ಉಂಟಾಗಿ ಸಾಕಷ್ಟು ಸಂಕಷ್ಟ ಉಂಟಾಗಿರುವುದರಿಂದ ಭಕ್ತರು, ಇಂತಹ ಸ್ಥಿತಿ ಯಾವತ್ತೂ ಬರದಿರಲಪ್ಪ ಅಂತ ದೇವರನ್ನು ಬೇಡಿಕೊಂಡಿದ್ದಾರೆ.

ದೇಹ ದಂಡಿಸಿಕೊಳ್ಳುತ್ತಿರುವ ಭಕ್ತರು

ಹಾಗಾಗಿ ತಮ್ಮನ್ನು ತಾವೇ ದಂಡಿಸಿಕೊಂಡರೆ ಮೈಲಾರಲಿಂಗೇಶ್ವರನ ಅನುಗ್ರಹಕ್ಕೆ ಪಾತ್ರರಾಗ್ತೇವೆ ಅನ್ನೋದು ಭಕ್ತರ ಅಭಿಪ್ರಾಯ. ಹೀಗಾಗಿ ಏಳು ಕೋಟಿ ಮೈಲಾರಲಿಂಗಪ್ಪನ ದೇವಸ್ಥಾನದ ಎದುರಲ್ಲಿ ದೇಹದಂಡನೆ ಮಾಡಿಕೊಂಡು ತಮ್ಮ ಬೇಡಿಕೆಯನ್ನು ಭಕ್ತರು ಈಡೇರಿಸಿಕೊಂಡ್ರು.

ಇಲ್ಲಿ ವ್ಯಕ್ತಿಯೊಬ್ಬ 450 ಮೀಟರ್ ದಾರವನ್ನು ಪೋಣಿಸಿಕೊಂಡು ದವಡೆಯ ಮೂಲಕ ದೇವಸ್ಥಾನದ ಅಂಗಳ ಸುತ್ತುಹಾಕುತ್ತಾ ಹೊರತೆಗೆದ. ಕಬ್ಬಿಣದ ಸರಪಳಿಯನ್ನು ಇಬ್ಬರು ಸೇರಿಕೊಂಡು ಮುರಿಯೋ ಮೂಲಕ ಪವಾಡ ಪ್ರದರ್ಶನವೂ ನಡೆಯಿತು. ಈ ವಿಶಿಷ್ಟ ಆಚರಣೆ ಇಷ್ಟಕ್ಕೆ ಮುಗಿದಿಲ್ಲ. ಮತ್ತೊಬ್ಬ ವ್ಯಕ್ತಿ ಅಂಗೈನ ಹಿಂಭಾಗದಲ್ಲಿ ಕೈಗೆ ದೀಪ ಚುಚ್ಚಿಸಿಕೊಂಡು ದೀಪಾರತಿ ಮಾಡಿದ. ಮೈಲಾರಲಿಂಗೇಶ್ವರನಿಗೆ ಕೈಗೆ ಚುಚ್ಚಿಸಿಕೊಂಡ ದೀಪ ಬೆಳಗೋ ಮೂಲಕ ಜನರಲ್ಲಿನ ಭಕ್ತಿ ಉನ್ಮಾದ ಹೆಚ್ಚಿಸಿದ. ಯುವಕ, ಯುವತಿಯರಿಂದ ಹಿಡಿದು ವೃದ್ಧರು ಕೂಡಾ ಈ ಪವಾಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಸ್ತ್ರ ಚುಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ಇಲ್ಲಿ ಹೊತ್ತ ಹರಕೆ ಈಡೇರಿದ ಮೇಲೂ ಭಕ್ತರು ಮತ್ತೆ ಶಸ್ತ್ರ ಚುಚ್ಚಿಸಿಕೊಂಡು ಹರಕೆ ತೀರಿಸುತ್ತಾರೆ. ಗೊರವಪ್ಪನ ನೂರಾರು ವೇಷಧಾರಿಗಳು ಢಮರುಗ ಬಾರಿಸುತ್ತಾ ಈ ವಿಶಿಷ್ಟ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇನ್ನೂ ಹಲವರು ಚಾಟಿಯಿಂದ ಹೊಡೆದುಕೊಳ್ಳೋ ಮೂಲಕ ದೇಹ ದಂಡಿಸಿಕೊಂಡರು.

ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳು ಈ ಬಾರಿ ಪ್ರವಾಹಕ್ಕೆ ಸಿಲುಕಿ ನಲುಗಿವೆ. ಊರಿನ ಜನರ ನೆಮ್ಮದಿಗಾಗಿ, ಹಾಗೂ ಮುಂದಿನ ದಿನಗಳಲ್ಲಿ ಈ ಸಲದಂತೆ ಪ್ರವಾಹ ಉಂಟಾಗದೇ ಇರಲಿ. ಜನಜೀವನವನ್ನು ಚೆನ್ನಾಗಿ ನಡೆಯಲಿ, ಸಮೃದ್ಧ ಮಳೆ ಬೆಳೆಗಯಾಗಿ ನಾಡು ಸುಭಿಷ್ಟೆಯಿಂದರಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.

Last Updated : Oct 8, 2019, 11:59 PM IST

ABOUT THE AUTHOR

...view details