ಗದಗ:ಇಟ್ಟಿಗೆಗಳ ಗೂಡಿನ ಮಧ್ಯದಲ್ಲಿ ಅವಿತು ಕೂತಿದ್ದ ಉರಗವೊಂದನ್ನು ಸೆರೆ ಹಿಡಿದ ಘಟನೆ ಗದಗ ತಾಲೂಕಿನ ಕಣವಿ ಹೊಸೂರಿನಲ್ಲಿ ನಡೆದಿದೆ.
ಗದಗ: ತೋಟದಲ್ಲಿ ಸಾಕಿದ್ದ ಕೋಳಿಯನ್ನು ದಿನಕ್ಕೊಂದರಂತೆ ನುಂಗುತ್ತಿದ್ದ ನಾಗರಹಾವು ಸೆರೆ! - ಕಪ್ಪತಗುಡ್ಡ
ಕಣವಿ ಹೊಸೂರಿನ ಮಂಜುನಾಥ್ ಮಡಿವಾಳರ ತೋಟದಲ್ಲಿ ಮನೆ ಮಾಡಿದ್ದ ನಾಗರ ಹಾವನ್ನು ಉರಗ ಪ್ರೇಮಿ ವಿಜಯ್ ಸೆರೆಹಿಡಿದು ಸುರಕ್ಷಿತವಾಗಿ ಕಪ್ಪತಗುಡ್ಡದಲ್ಲಿ ಬಿಟ್ಟಿದ್ದಾರೆ.
![ಗದಗ: ತೋಟದಲ್ಲಿ ಸಾಕಿದ್ದ ಕೋಳಿಯನ್ನು ದಿನಕ್ಕೊಂದರಂತೆ ನುಂಗುತ್ತಿದ್ದ ನಾಗರಹಾವು ಸೆರೆ! snake rescude](https://etvbharatimages.akamaized.net/etvbharat/prod-images/768-512-8981138-thumbnail-3x2-chaii.jpg)
ಕಣವಿ ಹೊಸೂರಿನ ಮಂಜುನಾಥ್ ಮಡಿವಾಳರ ಎಂಬುವರ ತೋಟದಲ್ಲಿ ಮನೆ ಮಾಡಿದ್ದ ನಾಗರ ಹಾವು, ದಿನಕ್ಕೊಂದರಂತೆ ತೋಟದಲ್ಲಿ ಸಾಕಿದ್ದ ಕೋಳಿ ಮರಿಗಳನ್ನು ನುಂಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮನೆಯವರು ಇಟ್ಟಿಗೆಯಲ್ಲಿ ಮನೆ ಮಾಡಿ ಅವಿತುಕೂತಿದ್ದ ನಾಗರ ಹಾವನ್ನು ಪತ್ತೆ ಹಚ್ಚಿ ಗದಗದ ಉರಗ ಪ್ರೇಮಿ ವಿಜಯ್ ಎಂಬುವರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ವಿಜಯ್, ಸುಮಾರು ಒಂದೂವರೆ ಕಾಲ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಪ್ಪತಗುಡ್ಡದಲ್ಲಿ ಬಿಟ್ಟಿದ್ದಾರೆ. ಇಷ್ಟುದಿನ ಹಾವಿನ ಭಯದಲ್ಲಿದ್ದ ಕೋಳಿ ಮತ್ತು ಕೋಳಿ ಮರಿಗಳು ಸಧ್ಯ ಭಯಮುಕ್ತವಾಗಿವೆ. ಮನೆಯ ಮಾಲೀಕರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.