ಗದಗ:ಪೌರತ್ವ ಕಾಯ್ದೆಯ ಕುರಿತು ದಾಖಲೆ ನಂದಿಲ್ಲ, ಇನ್ನೊಬ್ಬರದಿಲ್ಲ ಎಂದು ಕಾನೂನು ತಿಳಿದವರೆ ಹೇಳಿದರೆ ಹೇಗೆ ಎಂದು ಸಂಸದ ಶಿವಕುಮಾರ್ ಉದಾಸಿ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾನೂನು ಬಲ್ಲವರ ವಿರೋಧ ಸಲ್ಲದು: ಶಿವಕುಮಾರ್ ಉದಾಸಿ - ಶಿವಕುಮಾರ್ ಉದಾಸಿ ಲೆಟೆಸ್ಟ್ ನ್ಯೂಸ್
ಪೌರತ್ವ ಕಾಯ್ದೆಯ ಕುರಿತು ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಶಿವಕುಮಾರ್ ಉದಾಸಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
![ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾನೂನು ಬಲ್ಲವರ ವಿರೋಧ ಸಲ್ಲದು: ಶಿವಕುಮಾರ್ ಉದಾಸಿ Shivakumar udasi](https://etvbharatimages.akamaized.net/etvbharat/prod-images/768-512-5699181-thumbnail-3x2-gada.jpg)
ಶಿವಕುಮಾರ್ ಉದಾಸಿ
ಸಂಸದ ಶಿವಕುಮಾರ್ ಉದಾಸಿ
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಪ್ರಶ್ನಿಸಿದರು.
ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಆಗುವುದಿಲ್ಲ. ಇನ್ನು ಈ ಕಾಯ್ದೆ ಕುರಿತು ರೂಲ್ಸ್ ಪ್ರೇಮ್ ಕೂಡ ಆಗಿಲ್ಲ. ಈ ರೀತಿ ಏನು ಗೊತ್ತಿಲ್ಲದೆ ಮಾತನಾಡೋದ್ರಲ್ಲಿ ದುರುದ್ದೇಶ ಇದೆ ಎನ್ನುವದು ಗೊತ್ತಾಗುತ್ತೇ ಎಂದರು.