ಕರ್ನಾಟಕ

karnataka

ETV Bharat / state

ಪ್ರಧಾನಿ - ಅದಾನಿಗೂ ಇರುವ ಸಂಬಂಧ ಏನು?: ಮತ್ತೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ

ನನ್ನ ಎಂಪಿ ಮೆಂಬರ್ ಶಿಪ್ ರದ್ದುಗೊಳಿಸಿದರು. ಇವರು ಅಂದುಕೊಂಡರು ಮೆಂಬರ್​ಶಿಪ್ ಕಸಿದುಕೊಂಡರೆ, ಮನೆ ಕಸಿದುಕೊಂಡರೆ ರಾಹುಲ್ ಗಾಂಧಿ ಮಾತನಾಡಲ್ಲ ಅಂತ. ಆದರೆ ನಾನು ಮತ್ತೆ ಪ್ರಧಾನಿಯವರಿಗೆ ಕೇಳ್ತಿನಿ ಅದಾನಿ ಮತ್ತು ನಿಮ್ಮ ಸಂಬಂಧ ಏನು?- ಎಂದು ಕಾಂಗ್ರೆಸ್ ನಾಯಕ ರಾಹುಲ್ ಪ್ರಶ್ನಿಸಿದ್ದಾರೆ.

By

Published : Apr 25, 2023, 9:41 AM IST

Rahul Gandh​i in Karnataka
ರಾಹುಲ್ ಗಾಂಧಿ

ಯುವ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ

ಗದಗ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಸಂಜೆ ನಡೆದ ಯುವ ಸಂವಾದದಲ್ಲಿ ಮಾತನಾಡಿದ ಅವರು ಇಷ್ಟೊಂದು ಬಿಸಿಲು ಇದ್ದರೂ ಸಹ ನೀವು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ. ಹಾಗಾಗಿ ನಿಮಗೆ ಧನ್ಯವಾದಗಳು ಎನ್ನುವ ಮೂಲಕ ರಾಗಾ ತಮ್ಮ ಮಾತು ಆರಂಭಿಸಿದರು.

ನಿರುದ್ಯೋಗ ದೊಡ್ಡ ಸಮಸ್ಯೆ: ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಾವು ನಡೆದುಕೊಂಡು ಹೋಗುವಾಗ ಬಿಸಿಲು, ಮಳೆ, ಚಳಿ ಇದ್ದರೂ ನಿಮ್ಮ ಶಕ್ತಿ ನಮಗೆ ಪ್ರೋತ್ಸಾಹ ನೀಡಿತ್ತು. ಸಾವಿರಾರು ಯುವಕರ ಜೊತೆಗೆ ನಡೆದುಕೊಂಡು ಹೋದೆ. ಅವರ ಜತೆ ಮಾತನಾಡಿದೆ. ಅವರಿಗೆ ಪ್ರಶ್ನೆ ಮಾಡಿದೆ. ನಿಮಗೆ ಮುಂದಿನ ಸವಾಲು ಏನು? ಅಂತಾ ಕೇಳಿದೆ. ಅದರಲ್ಲಿ ಬಹುತೇಕರು ನಿರುದ್ಯೋಗದ ಬಗ್ಗೆ ಮಾತನಾಡಿದರು. ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಇಂಜಿನಿಯರ್, ಎಂಬಿಬಿಎಸ್ ಡಿಗ್ರಿ ಹೀಗೆ ಹಲವಾರು ಪದವಿ ಪಡೆದು ಡೆಲಿವರಿ ಬಾಯ್​ ಕೆಲಸ ಮಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಡಿಗ್ರಿ ಪಡೆದವರು ಕೆಲಸ ಇಲ್ಲದೇ ಅಲೆದಾಡುತ್ತಿದ್ದಾರೆ ಎಂದರು.

ಪ್ರಧಾನಿಯವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಎಂದರು. ಆದರೆ, ಈಗ ಸರ್ಕಾರದಿಂದ ಯಾವುದೇ ತರ ಉತ್ತರ ಇಲ್ಲ. ನಿಮ್ಮ ಶರ್ಟ್, ಚಪ್ಪಲಿ ಹೀಗೆ ಹಲವಾರು ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಇರುತ್ತದೆ. ನನ್ನ ಪ್ರಶ್ನೆ ಮೇಡ್ ಇನ್ ಚೀನಾ ಇದೆ, ಆದ್ರೆ ಮೇಡ್ ಇನ್ ಇಂಡಿಯಾ ಯಾಕೆ ಇಲ್ಲ?. ಕೇವಲ ಮೂರ್ನಾಲ್ಕು ಜನರಿಗೆ ಮಾತ್ರ ಈ ದೇಶವನ್ನು ಕೊಟ್ಟಿದ್ದಾರೆ. ಹೀಗಾಗಿ ಇದೆಲ್ಲ ಆಗ್ತಿಲ್ಲ. ಎಲ್ಲಾ ಸೆಕ್ಟರ್​ನಲ್ಲಿ ಈ ಮೂರ್ನಾಲ್ಕು ಜನರ ಏರ್ಪೋರ್ಟ್, ಇಂಡಸ್ಟ್ರೀಸ್ ಇದೆ. ಎಲ್ಲಾ ಕಡೆ ಈ ಮೂರ್ನಾಲ್ಕು ಜನ ಇರುತ್ತಾರೆ. ಇಡೀ ಚೈನಾದ ಮಾಲ್ ತಗೊಂಡು ಬಂದು ನಮ್ಮ ದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ನಾನು ಆಲೋಚನೆ ಮಾಡ್ತೇನೆ. ಮುಂದೊಂದು ದಿನ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾ ಅಂತಾ ಆಗಬೇಕು ಎಂದರು.

ಸರ್ಕಾರ ಜಿಎಸ್​ಟಿ, ಡಿಮಾನಿಟೈಸೇಷನ್​​ನಿಂದ ಸಣ್ಣ ಉದ್ಯೋಗ ಮುಚ್ಚಿ ಹಾಕಿದರು. ಗೌತಮ್​ ಆದಾನಿ ಅಂತವರಿಗೆ ಯಾವುದೇ ಬ್ಯಾಂಕ್​​ನಲ್ಲಿ ಲೋನ್ ಸಿಗುತ್ತದೆ. ಆದರೆ ನೀವು ಹೋದರೆ ಲೋನ್ ಸಿಗಲ್ಲ. ನಿಮ್ಮದು ಗೌತಮ್​ ಅದಾನಿ ಹೆಸರಲ್ಲ, ನರೇಂದ್ರ ಮೋದಿ ಜತೆಗೆ ನಿಮ್ಮ ಸಂಬಂಧ ಇಲ್ಲ. ಹೀಗಾಗಿ ನಿಮಗೆ ಲೋನ್ ಸಿಗಲ್ಲ. ಇದೇ ಬಿಜೆಪಿ ಮತ್ತು ಕಾಂಗ್ರೆಸ್​​ನಲ್ಲಿರುವ ವ್ಯತ್ಯಾಸ. ನಾವು ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತೇವೆ. ಸದ್ಯ ಇರುವ ಬೆಲೆ ಮತ್ತು ಕಾಂಗ್ರೆಸ್ ಇದ್ದಾಗ ಬೆಲೆ ಎಷ್ಟಿದೆ ಎಂಬುದನ್ನ ಗಮನಿಸಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಜಾಸ್ತಿಯಾಗಿದೆ. ಈ ಎಲ್ಲ ದುಡ್ಡು ಎಲ್ಲಿ ಹೋಗ್ತಿದೆ. ಕೊನೆಗೆ ನಿಮ್ಮ ಜೇಬಿಗಾದರೂ ಬರಬೇಕಲ್ವಾ? ಎಂದು ಕುಟುಕಿದರು.

ಅದಾನಿ ಮತ್ತು ಪ್ರಧಾನಿ ಸಂಬಂಧ ಏನು?:ಅದಾನಿಯವರು ಕೊನೆಗೆ ಇದ್ದಂತವರು ಈಗ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಂದಿದ್ದಾರೆ.ಸಂಸತ್​ನಲ್ಲಿ ನಿಮ್ಮ ಹಾಗೂ ಅದಾನಿಯವರ ಸಂಬಂಧ ಏನು ಅಂತ ಕೇಳಿದೆ. ಶ್ರೀಲಂಕಾಗೆ ಹೋದರು ಅದಾನಿಗೆ ಹೆಲ್ಪ್ ಮಾಡಬೇಕು ಅಂತಾ ಹೇಳ್ತಿರಿ. ಆಸ್ಟ್ರೇಲಿಯಾದಲ್ಲಿ ಲೋನ್ ಸಿಗುತ್ತೆ, ಬಾಂಗ್ಲಾದೇಶಕ್ಕೆ ಹೋದರೂ ಅಲ್ಲಿ ಕಾಂಟ್ರ್ಯಾಕ್ಟರ್ ಕೆಲಸ ಕೊಡ್ತಾರೆ. ಹೀಗೆ ಹಲವಾರು ದೇಶಗಳಲ್ಲಿ ಹೆಲ್ಪ್ ಮಾಡಿ ಅಂತ ಹೇಳಿ ಬರ್ತಾರೆ. ನನ್ನ ಭಾಷಣವನ್ನ ತೆಗೆದು ಹಾಕಿದರು. ನನ್ನ ಎಂಪಿ ಮೆಂಬರ್ ಶಿಪ್ ರದ್ದುಗೊಳಿಸಿದರು. ಇವರು ಅಂದುಕೊಂಡರು ಮೆಂಬರ್​ಶಿಪ್ ಕಸಿದುಕೊಂಡರೆ, ಮನೆ ಕಸಿದುಕೊಂಡರೆ ರಾಹುಲ್ ಗಾಂಧಿ ಮಾತನಾಡಲ್ಲ ಅಂತ. ಆದರೆ ನಾನು ಮತ್ತೆ ಪ್ರಧಾನಿಯವರಿಗೆ ಕೇಳ್ತಿನಿ ಅದಾನಿ ಮತ್ತು ನಿಮ್ಮ ಸಂಬಂಧ ಏನು ಎಂದು ಪ್ರಶ್ನೆ ಮಾಡಿದರು.

ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ: ಕಿತ್ತೂರು ಕರ್ನಾಟಕ ಭಾಗದಲ್ಲಿ ಸಹೋದರ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಿತುವ ಬೆನ್ನಲ್ಲೇ ಈಗ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದು ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಬರಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗಿರಿಜನ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ‌‌.

ಗಿರಿಜನ ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ನೀತಿ, ಕಾರ್ಯಕ್ರಮಗಳ ಬಗ್ಗೆ ಪ್ರಿಯಾಂಕಾ ತಿಳಿಸಲಿದ್ದಾರೆ. ಸಂವಾದದ ಬಳಿಕ ಜಿಲ್ಲೆಯ ನಾಲ್ಕು ಕ್ಷೇತ್ರದ ಕೈ ಅಭ್ಯರ್ಥಿಗಳ ಪರವಾಗಿ ಚುನಾವಣಾ ಭಾಷಣ ಮಾಡಲಿದ್ದು, ಈಗಾಗಲೇ ಹನೂರಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸೋಮವಾರವಷ್ಟೇ ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ ಮಾಡಿ ಕಮಲ ಪಡೆಗೆ ರಣೋತ್ಸಾಹ ತುಂಬಿದ್ದರು. ಈಗ ಕೈ ನಾಯಕಿ ಎಂಟ್ರಿ ಕೊಡುತ್ತಿದ್ದು ಕೈ ಪಡೆಗೆ ಶಕ್ತಿ ತುಂಬಲಿದ್ದಾರೆ.

ಇದನ್ನೂ ಓದಿ:ನಮ್ಮ ಸರ್ಕಾರ ಬಂದ್ರೆ ಕಬ್ಬಿಗೆ ಏಕರೂಪ ದರ ನಿಗದಿ: ರಾಹುಲ್ ಗಾಂಧಿ ಭರವಸೆ

ABOUT THE AUTHOR

...view details