ಕರ್ನಾಟಕ

karnataka

ETV Bharat / state

ಸ್ಮಶಾನಕ್ಕಾಗಿ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ - ತಹಶೀಲ್ದಾರ್ ಕಚೇರಿ ಆವರಣ

ಸ್ಮಶಾನಕ್ಕಾಗಿ ಜಾಗ ಇಲ್ಲ. ಇತ್ತ ಪುರಸಭೆ ವತಿಯಿಂದ ಅಂತ್ಯಕ್ರಿಯೆಗಾಗಿ ಶ್ರದ್ಧಾಂಜಲಿ ವಾಹನದ ವ್ಯವಸ್ಥೆಯನ್ನೂ ಸಹ ಅಧಿಕಾರಿಗಳು ಮಾಡಿಲ್ಲ ಎಂದು ಆರೋಪಿಸಿ ಹರಿಪೂರ ನಿವಾಸಿಗಳು ತಹಶೀಲ್ದಾರ್ ಕಾರ್ಯಾಲಯಕ್ಕೆ ಶವಯಾತ್ರೆ ಸಮೇತ ಆಗಮಿಸಿ ಶವ ಇಟ್ಟು ಪ್ರತಿಭಟನೆ ಮಾಡಿದರು.

ಸ್ಮಶಾನಕ್ಕಾಗಿ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ

By

Published : Sep 16, 2019, 10:38 PM IST

ಗದಗ:ಸ್ಮಶಾನಕ್ಕಾಗಿ ಜಾಗ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಸ್ಮಶಾನಕ್ಕಾಗಿ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ

ಶಿರಹಟ್ಟಿ ಪಟ್ಟಣದ 2ನೇ ವಾರ್ಡ್ ನ ಹರಿಪೂರ ನಿವಾಸಿ ಪ್ರಭಣ್ಣ ಮೊರಬದ (65) ನಿನ್ನೆ ಮೃತಪಟ್ಟಿದ್ದಾರೆ. ಆದರೆ, ಅವರ ಅಂತ್ಯಕ್ರಿಯೆಗೆ ಇಂದು ಸ್ಮಶಾನವೇ‌ ಇಲ್ಲದ ಕಾರಣ ಹರಿಪೂರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಮಶಾನಕ್ಕೆ ಜಾಗ ನೀಡಿ ಎಂದು ಸ್ಥಳೀಯರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವೊಬ್ಬ ಅಧಿಕಾರಿಯೂ ಇದಕ್ಕೆ ಕ್ಯಾರೆ ಎಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ಮೊದಲಿದ್ದ ತಾತ್ಕಾಲಿಕ ಸ್ಮಶಾನ ಜಾಗಕ್ಕೆ ಜಮೀನಿನ ಮಾಲೀಕ ಬೇಲಿ ಹಾಕಿದ್ದಾನೆ. ಇತ್ತ ಪುರಸಭೆ ವತಿಯಿಂದ ಅಂತ್ಯಕ್ರಿಯೆಗಾಗಿ ಶ್ರದ್ಧಾಂಜಲಿ ವಾಹನದ ವ್ಯವಸ್ಥೆಯನ್ನೂ ಸಹ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ರೋಸಿ ಹೋದ ಸ್ಥಳೀಯರು ಇಂದು ತಹಶೀಲ್ದಾರ್ ಕಾರ್ಯಾಲಯಕ್ಕೆ ಶವಯಾತ್ರೆ ಸಮೇತ ಆಗಮಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿಯೇ ಅಂತ್ಯಸಂಸ್ಕಾರ ನಡೆಸುತ್ತೇವೆ ಅಂತ ಪಟ್ಟು ಹಿಡಿದ್ರು.

ಇನ್ನು ಪ್ರತಿಭಟನೆ ವಿಷಯ ತಿಳಿದ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ ಸ್ಥಳದಿಂದ ಕಾಲ್ಕಿತ್ತಿದ್ದರು. ನಂತರ ಸಮಸ್ಯೆಯ ತೀವ್ರತೆ ಅರಿತು ವಾಪಾಸು ಆಗಮಿಸಿ, ಕೆಲವೇ ದಿನಗಳಲ್ಲಿ ಸ್ಮಶಾನಕ್ಕೆ ಜಾಗ ನೀಡುವುದಾಗಿ ಪ್ರತಿಭಟನಾನಿರತರಿಗೆ ಭರವಸೆ ನೀಡಿದ್ರು.

ABOUT THE AUTHOR

...view details