ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಶೆಡ್ ನಿರ್ಮಿಸಿಕೊಡುವ ಭರವಸೆ ಕೊಟ್ಟ ನರಗುಂದ ತಹಶೀಲ್ದಾರ್​​​​ - ತಹಶೀಲ್ದಾರ್ ಕೆ ಬಿ ಕೋರಿಶೆಟ್ಟಿ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಸಂತ್ರಸ್ತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶೆಡ್ ನಿರ್ಮಿಸಿ ಕೊಡುವ ಭರವಸೆ

By

Published : Sep 7, 2019, 6:39 PM IST

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಊರನ್ನು ತೊರೆದಿದ್ದಾರೆ. ಆದರೆ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಉಳಿಯೋದಕ್ಕೆ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಮಾತ್ರ ಸಂಪೂರ್ಣ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಈ ಕುರಿತು ಈಟಿವಿ ಭಾರತದಲ್ಲಿ ವರದಿ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಕೂಡಲೇ ಶೆಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ತಾತ್ಕಾಲಿಕ ಶೆಡ್ ನಿರ್ಮಿಸಿಡಲು ಗ್ರಾಮಸ್ಥರ ಆಗ್ರಹ

ಕಳೆದ ತಿಂಗಳ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಸ್ಥರು ತಾತ್ಕಾಲಿಕ ಶೆಡ್​ಗೆ ಬೇಡಿಕೆ ಇಟ್ಟಿದ್ದರು. ಆದರೂ ಸಹ ಜಿಲ್ಲಾಡಳಿತ ಇವರ ಬೇಡಿಕೆ ಈಡೇರಿಸಿರಲಿಲ್ಲ. ಈಗ ಸಹ ಅದೇ‌ ನಿರ್ಲಕ್ಷ್ಯ ತೋರಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಅಂತ ಬೇಡಿಕೆಯಿಟ್ರೂ ಸಹ ಅದಕ್ಕೂ ಸ್ಪಂದನೆ ಮಾಡದ ಜಿಲ್ಲಾಡಳಿತ, ಇಲ್ಲಸಲ್ಲದ ಕಾರಣ ಹೇಳುತ್ತಿದೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಈ ಪರಿಸ್ಥಿಯನ್ನು ಪರಾಮರ್ಶೆ ಮಾಡೋದಕ್ಕಾಗಿ ಸ್ಥಳಕ್ಕೆ ಹೋಗಿದ್ದ ನರಗುಂದ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟಿ ಅವರಿಗೆ ಸಂತ್ರಸ್ತರು ತರಾಟೆಗೆ ತೆಗೆದುಕೊ‌ಂಡರು. ನೀವೇ ಏನಾದರೂ ಮಾಡಿ ನಮಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಅಂತ ಆಗ್ರಹ ಮಾಡಿದರು. ಇನ್ನು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ನಾವು ಬೀದಿಯಲ್ಲಿರಬೇಕಾಗಿದೆ. ರಾತ್ರಿಯೆಲ್ಲಾ ಅನಿವಾರ್ಯವಾಗಿ ರಸ್ತೆಯಲ್ಲೇ ಮಲಗೋವಂತಾಗಿದೆ. ಹುಳಹುಪ್ಪಟೆಗಳ ಕಾಟದ ಜೊತೆ, ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.‌ ಕೂಡಲೇ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತ್ರಸ್ತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details