ಕರ್ನಾಟಕ

karnataka

ETV Bharat / state

ಶಾಲೆಯಲ್ಲಿ ಪೈಗಂಬರ್ ಪ್ರಬಂಧದ ಬಗ್ಗೆ ಮಾಹಿತಿ: ಮುಖ್ಯೋಪಾಧ್ಯಾಯರಿಗೆ ಬಿಇಒ ತರಾಟೆ - ಮುಖ್ಯೋಪಾಧ್ಯಾಯರನ್ನು ಬಿಇಒ ತರಾಟೆ

ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಹಮ್ಮದ್​ ಪೈಗಂಬರ್​ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದಕ್ಕೆ, ಶಾಲೆಯ ಮುಖ್ಯೋಪಾಧ್ಯಾಯರನ್ನು ಬಿಇಒ ತರಾಟೆಗೆ ತೆಗೆದುಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

muhammad-prophet-essay-issue-in-gadag-school
ಶಾಲೆಯಲ್ಲಿ ಪೈಗಂಬರ್ ಪ್ರಬಂಧದ ಬಗ್ಗೆ ಮಾಹಿತಿ : ಮುಖ್ಯೋಪಾಧ್ಯಾಯನಿಗೆ ಬಿಇಒ ತರಾಟೆ

By

Published : Sep 27, 2022, 9:33 PM IST

Updated : Sep 28, 2022, 3:56 PM IST

ಗದಗ : ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಬೋಧನಾ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿ ಪ್ರಬಂಧ ಏರ್ಪಡಿಸಿ ಹಿಂದೂ ಪರ ಸಂಘಟನೆಯ ಕೆಂಗಣ್ಣಿಗೆ ಗುರಿಯಾದ ಘಟನೆ ಗದಗದಲ್ಲಿ ನಡೆದಿದೆ.

ತಾಲೂಕಿನ ನಾಗಾವಿ ಗ್ರಾಮದ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಮುನಾಫ್ ಬಿಜಾಪುರ ಅವರು ಶಾಲೆಯಲ್ಲಿ ಮಹಮ್ಮದ್ ಪೈಗಂಬರ್ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದಕ್ಕೆ ಶ್ರೀರಾಮಸೇನೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಹಿನ್ನೆಲೆ ಶಾಲೆಗೆ ಬಂದು ವಿಚಾರಣೆ ನಡೆಸಿದ ಬಿಇಒ ವಿವಿ ನಡುವಿನಮನಿ ಮುಖ್ಯೋಪಾಧ್ಯಾಯನಿಗೆ ತರಾಟೆ ತೆಗೆದುಕೊಂಡರು. ಜೊತೆಗೆ ಇಲಾಖೆ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವಂತೆ ತಿಳಿಸಿದರು.

ಸಂಘಟನೆ ಕಾರ್ಯಕರ್ತರ ಆಕ್ರೋಶ

ಘಟನೆಯ ವಿವರ :ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಹೇಳುವ ಪ್ರಕಾರ, ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬುವರು ಶಾಲೆಗೆ ಆಗಮಿಸಿ ಮಹಮ್ಮದ್ ಪೈಗಂಬರ್ ಕುರಿತು ಪುಸ್ತಕ ವಿತರಿಸಿದರು. ಈ ಪುಸ್ತಕಗಳನ್ನು ಓದಿ ಪೈಗಂಬರ್ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ, ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವುದಾಗಿ ಹೇಳಿದ್ದರಂತೆ.

ಶ್ರೀರಾಮ ಸೇನೆ ಮುತ್ತಿಗೆ : ಶಾಲೆಯಲ್ಲಿ ವಿತರಿಸಿದ್ದ ಮೊಹಮ್ಮದ್ ಪೈಗಂಬರ್ ಪುಸ್ತಕಗಳನ್ನು ಕೆಲ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿ ನೋಡಿದ್ದಾರೆ. ಈ ವಿಷಯವನ್ನು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಬಳಿಕ ಶಾಲೆಗೆ ಆಗಮಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಹೊತ್ತು ಶಾಲಾ ಆವರಣದಲ್ಲಿ ಮುಖ್ಯೋಪಾಧ್ಯಾಯರ ವಿರುದ್ಧ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಮುಖ್ಯೋಪಾಧ್ಯಾಯರು ನಾನು ಇಂತಹ ತಪ್ಪು ಮಾಡಿಲ್ಲ. ತಪ್ಪಾಯ್ತು ಕ್ಷಮಿಸಿ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಬಿಇಒ, ಪೊಲೀಸರ ಭೇಟಿ : ವಿಷಯ ತಿಳಿಯುತ್ತಿದ್ದಂತೆ ಬಿಇಒ ನಡುವಿನಮನಿ ಮತ್ತು ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದರು.

ಇದನ್ನೂ ಓದಿ :ವೇದಿಕೆ ಮೇಲೆ ಎಡವಿದ ಸಿದ್ದರಾಮಯ್ಯ.. ಗಲಿಬಿಲಿಗೊಂಡ ಮಾಜಿ ಸಿಎಂ.. ವಿಡಿಯೋ

Last Updated : Sep 28, 2022, 3:56 PM IST

ABOUT THE AUTHOR

...view details