ಗದಗ : ವಿಷಪೂರಿತ ಸೌವತೆಕಾಯಿ ಬಳ್ಳಿ (ಇಸಬಳ್ಳಿ) ಆಹಾರ ಸೇವಿಸಿ 30 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ರೋಣ ತಾಲೂಕಿನ ನರೆಗಲ್ಲ ಪಟ್ಟಣದಲ್ಲಿ ನಡೆದಿದೆ.
ವಿಷಪೂರಿತ ಸೌವತೆಕಾಯಿ ಬಳ್ಳಿ ಸೇವಿಸಿ 30 ಕ್ಕೂ ಹೆಚ್ಚು ಕುರಿಗಳು ಸಾವು - More than 30 sheep died by eating cucumber
ಗದಗದ ಗ್ರಾಮವೊಂದರಲ್ಲಿ ವಿಷಪೂರಿತ ಸೌತೆಕಾಯಿ ಬಳ್ಳಿ ಸೇವಿಸಿ, 30 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಕುರಿಗಳು ಸಾವು
ಸಾವನ್ನಪ್ಪಿರುವ ಕುರಿಗಳು ಬಸಪ್ಪ ವೀರಪ್ಪ ಗಡ್ಡದ, ಯಲ್ಲಪ್ಪ ಹನುಮಪ್ಪ ಎಮ್ಮಿ ಹಾಗೂ ಕಳಕಪ್ಪ ರಾಮಜಪ್ಪ ರಾಠೂಡ ಎಂಬವರಿಗೆ ಸೇರಿವೆ. ಕಳೆದ ರಾತ್ರಿ ಘಟನೆ ನಡೆದಿದೆ.
30 ಕ್ಕೂ ಹೆಚ್ಚು ಕುರಿಗಳು ಸಾವು
ಬಂಡಿಹಾಳ ರಸ್ತೆ ಅಕ್ಕಪಕ್ಕದ ಜಮೀನಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.