ಕರ್ನಾಟಕ

karnataka

ETV Bharat / state

ಬೇಸಿಗೆಯ ತಾಪಕ್ಕೆ ಮನೆಯವರು ಮನೆ ಮಾಳಿಗೆ ಮೇಲೆ... ಕಳ್ಳರು ಮನೆಯೊಳಗೆ..!

ಬೇಸಿಗೆಯ ತಾಪ ತಾಳಲಾರದೇ‌ ಕುಟುಂಬಸ್ಥರು ಮನೆ ಟೆರೇಸ್ ಮೇಲೆ‌ ಮಲಗಿದ್ದ ವೇಳೆ ಖದೀಮರು ಮನೆಯಲ್ಲಿದ್ದ ಹಣ, ಒಡವೆ, ಬೈಕ್​ ಕದ್ದು ಎಸ್ಕೇಪ್​ ಆಗಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

By

Published : Mar 8, 2020, 3:20 PM IST

money,bike,gold theft in naragunda
ಬೇಸಿಗೆಯ ತಾಪಕ್ಕೆ ಮನೆಯವರು ಮನೆ ಮಾಳಿಗೆ ಮೇಲೆ..ಕಳ್ಳರು ಮನೆಯೊಳಗೆ..!

ಗದಗ:ಬೇಸಿಗೆಯ ತಾಪ ತಾಳಲಾರದೇ‌ ಕುಟುಂಬಸ್ಥರು ಮನೆ ಟೆರೇಸ್ ಮೇಲೆ‌ ಮಲಗಿದ್ದ ವೇಳೆ ಖದೀಮರು ಮನೆಯಲ್ಲಿದ್ದ ಹಣ, ಒಡವೆ, ಬೈಕ್​ ಕದ್ದು ಎಸ್ಕೇಪ್​ ಆಗಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಬೇಸಿಗೆಯ ತಾಪಕ್ಕೆ ಮನೆಯವರು ಮನೆ ಮಾಳಿಗೆ ಮೇಲೆ..ಕಳ್ಳರು ಮನೆಯೊಳಗೆ..!

ಪಟ್ಟಣದ ವಿನಾಯಕ ನಗರದ ಕೆಎಸ್ಆರ್​ಟಿಸಿ ಬಸ್ ಚಾಲಕ ಮಹಾಂತೇಶಗೌಡ ಎಂಬುವರು ರಾತ್ರಿ ಡ್ಯೂಟಿ ಮುಗಿಸಿಕೊಂಡು ಬಂದ ನಂತರ ಬೇಸಿಗೆ ತಾಪಕ್ಕೆ‌ ಕುಟುಂಬದವರೆಲ್ಲರೂ ಮನೆಯ ಟೆರೇಸ್ ಮೇಲೆ‌ ಮಲಗಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ ಖದೀಮರು, ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ 35 ಗ್ರಾಂ ಮಾಂಗಲ್ಯ ಸರ, 10 ಗ್ರಾಂ ಚಿನ್ನದ ಸರ, 5 ಗ್ರಾಂ ಕಿವಿ ಓಲೆ, 25 ಗ್ರಾಂ ಬೆಳ್ಳಿ ಕಾಲುಂಗುರ, 30 ಸಾವಿರ ನಗದು ಸೇರಿ ಬೈಕನ್ನು ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ನರಗುಂದ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details