ಕರ್ನಾಟಕ

karnataka

By

Published : Apr 8, 2020, 9:48 PM IST

ETV Bharat / state

ಗೋವಾದಲ್ಲಿರುವ ಗದಗದ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ್​​

ಉದ್ಯೋಗಕ್ಕಾಗಿ ಗೋವಾಕ್ಕೆ ಹೋಗಿದ್ದ ಗದಗದ ಸುಮಾರು 800 ಕಾರ್ಮಿಕರಿಗೆ ಸಚಿವ ಸಿ.ಸಿ.ಪಾಟೀಲ್​ 10 ದಿನಗಳಿಗೆ ಆಗುವಷ್ಟು ದಿನಸಿ, ತರಕಾರಿಯನ್ನು ವಾಹನದ ಮೂಲಕ ಕಳುಹಿಸಿ ಕೊಟ್ಟಿದ್ದಾರೆ. 800 ಕಿಟ್​​​ಗಳನ್ನು ಸಿದ್ಧಪಡಿಸಿ ಕಳುಹಿಸಲಾಗಿದೆ.

minister c.c.patil sent groceries
ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ್

ಗದಗ: ಕೆಲಸ ಅರಸಿ ದೂರದ ಗೋವಾಕ್ಕೆ ಹೋಗಿದ್ದ ಗದಗದ ಕಾರ್ಮಿಕರು ಲಾಕ್​ಡೌನ್​ನಿಂದಾಗಿ ಅಲ್ಲಿಯೇ ಉಳಿದಿದ್ದಾರೆ. ಅವರಿಗೆ 10 ದಿನಗಳಿಗಾಗುವಷ್ಟು ತರಕಾರಿ, ದಿನಸಿಯನ್ನು ವಾಹನದ ಮೂಲಕ ಸಚಿವ ಸಿ.ಸಿ.ಪಾಟೀಲ್ ಕಳುಹಿಸಿ ಕೊಟ್ಟಿದ್ದಾರೆ.

ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ್

ಕಾರ್ಮಿಕರು ಗೋವಾದ ಪಣಜಿ ಮತ್ತು ಮಡಗಾಂವ್​ನಲ್ಲಿದ್ದಾರೆ. ಅವರೆಲ್ಲಾ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 800 ಕಾರ್ಮಿಕರಾಗಿದ್ದಾರೆ.

ದಿನಸಿ ಕಿಟ್​ನಲ್ಲಿ ಏನಿದೆ: 5 ಕೆಜಿ ಅಕ್ಕಿ, ತಲಾ 1 ಕೆಜಿ ರವಾ, ತೊಗರಿ ಬೇಳೆ, ಹೆಸರುಕಾಳು, ಆಲೂಗಡ್ಡೆ, ಈರುಳ್ಳಿ, 1 ಲೀಟರ್ ಅಡುಗೆ ಎಣ್ಣೆ ಜೊತೆಗೆ ಸಕ್ಕರೆ, ಚಹಾ ಪುಡಿ, ಉಪ್ಪು, ಸಾಸಿವೆ, ಜೀರಿಗೆ, ಅರಿಷಿಣ, ಖಾರದ ಪುಡಿ, ಮಸಲಾ ಪುಡಿ ಮತ್ತು ಬೆಳ್ಳುಳ್ಳಿ ಹಾಗೂ ಸ್ನಾನ, ಬಟ್ಟೆ ಸಾಬೂನುಗಳನ್ನು ಕಳುಹಿಸಿದ್ದಾರೆ.

ABOUT THE AUTHOR

...view details