ಕರ್ನಾಟಕ

karnataka

ETV Bharat / state

ಗದಗದಿಂದ ಹುಬ್ಬಳ್ಳಿಗೆ ಬಿಹಾರ ಕಾರ್ಮಿಕರ ರವಾನೆ: ಬಸ್​​ನಲ್ಲಿ ಪಾಲನೆ ಆಗದ ಸಾಮಾಜಿಕ ಅಂತರ

ಬಿಹಾರಕ್ಕೆ ತೆರಳುವ 180 ಕಾರ್ಮಿಕರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಿನಿ ಬಸ್​ಗಳ ಮೂಲಕ ಕಳುಹಿಸಲಾಯಿತು.

By

Published : May 20, 2020, 1:55 PM IST

Workers who went to Bihar
ಬಿಹಾರಕ್ಕೆ ತೆರಳಿದ ಕಾರ್ಮಿಕರು

ಗದಗ:ಬಿಹಾರಕ್ಕೆ ತೆರಳುವ 180 ಕಾರ್ಮಿಕರನ್ನು ಮಿನಿ ಬಸ್ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು. ಕೆಲವರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಅಲ್ಲದೆ ಸಾಮಾಜಿಕ ಅಂತರವೂ ಪಾಲನೆಯಾಗಿಲ್ಲ ಎನ್ನಲಾಗಿದೆ.

ಬಿಹಾರಕ್ಕೆ ತೆರಳಿದ ಕಾರ್ಮಿಕರು

ಅಧಿಕಾರಿಗಳೇ ಮುಂದೆ ನಿಂತು ಕುರಿ ಮಂದೆಯಂತೆ ಕಾರ್ಮಿಕರನ್ನು ಮಿನಿ ಬಸ್​​​​​ಗೆ ತುಂಬಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸೀಟ್​​ನಲ್ಲಿ‌ ಇಬ್ಬರು, ಮೂವರು ಕಾರ್ಮಿಕರು ಕುಳಿತರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

ABOUT THE AUTHOR

...view details