ಕರ್ನಾಟಕ

karnataka

By

Published : Feb 21, 2020, 5:17 AM IST

ETV Bharat / state

ರಾಜ್ಯಕ್ಕೆ ಮಹದಾಯಿ ಗೆಲುವು... ನರಗುಂದದಲ್ಲಿ‌ ರೈತರ ಸಂಭ್ರಮಾಚರಣೆ

ಮಹದಾಯಿ ನೋಟಿಪಿಕೆಷನ್ ತೀರ್ಪು ವಿಚಾರವಾಗಿ ರಾಜ್ಯಕ್ಕೆ ಸಿಹಿ ಸುದ್ದಿ ಬಂದ ಹಿನ್ನಲೆಯಲ್ಲಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಹಾಗೂ ನರಗುಂದ ಪಟ್ಟಣದಲ್ಲಿ ರೈತರು ವಿಜಯೋತ್ಸವ ಆಚರಣೆ ಮಾಡಿದ್ದಾರೆ.

mhadayi-judgment
ಮಹದಾಯಿ ತೀರ್ಪು.. ನರಗುಂದಲ್ಲಿ‌ ಸಂಭ್ರಮಾಚರಣೆ

ಗದಗ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಜಾರಿಗೊಳಿಸಬೇಕೆಂಬ ಕರ್ನಾಟಕದ ಮನವಿಗೆ ಸುಪ್ರೀಂಕೋರ್ಟ್‌ ಮನ್ನಣೆ ನೀಡಿದೆ. ರಾಜ್ಯಕ್ಕೆ ಸಿಕ್ಕ ಮಹದಾಯಿ ಗೆಲುವಿನ ಹಿನ್ನೆಲೆಯಲ್ಲಿ ನಗರದ ಮಹಾತ್ಮಾ ಗಾಂಧಿ ವೃತ್ತ ಹಾಗೂ ನರಗುಂದ ಪಟ್ಟಣದಲ್ಲಿ ರೈತರು ವಿಜಯೋತ್ಸವ ಆಚರಿಸಿದರು.

ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿವಿಧ ರೈತಪರ ಸಂಘಟನೆಗಳು ಈ ಭಾಗದಲ್ಲಿ ಇಂದಿಗೆ 1680 ದಿನಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿವೆ.

ಮಹದಾಯಿ ತೀರ್ಪಿನಿಂದ ನರಗುಂದಲ್ಲಿ‌ ರೈತರ ಸಂಭ್ರಮಾಚರಣೆ

ನದಿ ನೀರು ಹಂಚಿಕೆ ಯೋಜನೆ ಜಾರಿಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಇಂದು ಗೆಜೆಟ್​ ನೋಟಿಪಿಕೆಷನ್ ವಿಚಾರವಾಗಿ ರಾಜ್ಯಕ್ಕೆ ಸಿಹಿ ಸುದ್ದಿ ಬಂದಿದೆ ಎಂದು ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details