ಕರ್ನಾಟಕ

karnataka

ETV Bharat / state

ಮಹಾದಾಯಿ ವಿಷ್ಯದಲ್ಲಿ ರಾಜ್ಯಕ್ಕೆ ಅನ್ಯಾಯ, ಸಚಿವರೇ ಎಲ್ಲಿದ್ದೀರಿ?: ಹೆಚ್.ಕೆ.ಪಾಟೀಲ್ ಪ್ರಶ್ನೆ - ಮಹಾದಾಯಿ ನೀರು ಹಂಚಿಕೆ ವಿವಾದ

ಕಳಸಾ ಬಂಡೂರಿ, ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಗಂಭೀರವಾದ ಹೆಜ್ಜೆಯಿಡಬೇಕೆಂದು ಮಾಜಿ ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

mahadayi-water-dispute
ಹೆಚ್.ಕೆ.ಪಾಟೀಲ್

By

Published : Dec 18, 2019, 9:01 PM IST

ಗದಗ: ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದೆ.

ಗೋವಾದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಯೋಜನೆಯ ಜಾರಿ ಆದೇಶವನ್ನು ಇದ್ದಕ್ಕಿದ್ದಂತೆ ಅಮಾನತ್ತು ಮಾಡುವುದಾಗಿ ಪ್ರಕಟಿಸಿದೆ. ಕೇಂದ್ರದ ಈ ನಡೆಗೆ ಶಾಸಕ ಹೆಚ್.ಕೆ.ಪಾಟೀಲ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್​​.ಕೆ.ಪಾಟೀಲ್​ ಟ್ವೀಟ್​

ಕೇಂದ್ರದ ಕರ್ನಾಟಕದ ಸಚಿವರೇ ಎಲ್ಲಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ್ಕಕ್ಕಾಗುವ ಅನ್ಯಾಯ ತಪ್ಪಿಸಿ. ಮುಖ್ಯಮಂತ್ರಿಗಳೇ‌ ಗಂಭೀರವಾದ ಹೆಜ್ಜೆಯಿಡಿ ಎಂದು ರಾಜ್ಯದ ಯಡಿಯೂರಪ್ಪ ಅವರಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ.

ಅಕ್ಟೋಬರ್​ 10ರಂದು ಪರಿಸರ ಮತ್ತು ಅರಣ್ಯ ಇಲಾಖೆ ಮಂಜೂರಾತಿ ಯೋಜನೆಗೆ ನೀಡಿತ್ತು. ಇದೀಗ ಗೋವಾ ಸರ್ಕಾರದ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಮಂಜೂರಾತಿಗೆ ತಡೆ ನೀಡಿದ ಪರಿಣಾಮ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ABOUT THE AUTHOR

...view details