ಕರ್ನಾಟಕ

karnataka

ETV Bharat / state

ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ - ಹಕ್ಕು ಪತ್ರ ವಿತರಣೆ

ಪ್ರತಿಭಟನೆ ಆರಂಭವಾಗಿ ಕೆಲವೇ ಹೊತ್ತಲ್ಲಿ ಜೇನುಹುಳುಗಳು ದಾಳಿ ನಡೆಸಿದವು. ಪರಿಣಾಮ, ಪ್ರತಿಭಟನಾ‌ನಿರತರು, ಪತ್ರಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ತಪ್ಪಿಸಿಕೊಂಡು ಸ್ಥಳದಿಂದ ಬೇರೆಡೆ ತೆರಳಿದರು.

Honey bee attack on protesters In Gadag
ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ

By

Published : Mar 9, 2021, 4:23 PM IST

ಗದಗ:ಆಶ್ರಯ ಮನೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಪಟ್ಟಣದ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ. ರೋಣ ತಾಲೂಕಿನ ಗಾಡಗೋಳಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಶ್ರಯ ಮನೆಯ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ

ಪ್ರತಿಭಟನೆ ಆರಂಭವಾಗಿ ಕೆಲವೇ ಹೊತ್ತಲ್ಲಿ ಜೇನುಹುಳುಗಳು ದಾಳಿ ನಡೆಸಿದವು. ಜೇನುಹುಳುಗಳ ದಾಳಿಯಿಂದ ಪ್ರತಿಭಟನಾ‌ನಿರತರು, ಪತ್ರಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ತಪ್ಪಿಸಿಕೊಂಡು ಸ್ಥಳದಿಂದ ಬೇರೆಡೆ ತೆರಳಿದರು.

ಈ ವೇಳೆಗಾಗಲೇ ಹಲವರಿಗೆ ಜೇನುಹುಳುಗಳು ಕಚ್ಚಿದ್ದು, ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಗದಗದಲ್ಲಿ ಹುಚ್ಚುನಾಯಿ ದಾಳಿ: 20 ಕ್ಕೂ ಅಧಿಕ ಮಂದಿಗೆ ಗಾಯ

ABOUT THE AUTHOR

...view details