ಗದಗ: ಜಿಲ್ಲಾದ್ಯಂತ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ಆರ್ಭಟಕ್ಕೆ ಅನೇಕ ಕಡೆಗಳಲ್ಲಿ ಮನೆಗಳು ಧರೆಗುರುಳಿವೆ. ನೋಡ ನೋಡುತ್ತಿದ್ದಂತೆ ಆರಂಭವಾದ ಮಳೆ ಭಾರಿ ಹಾನಿಯನ್ನುಂಟು ಮಾಡಿದೆ.
ಗದಗ ಜಿಲ್ಲಾದ್ಯಂತ ಭಾರಿ ಮಳೆ; ಧರೆಗುರುಳಿದ ಮನೆಗಳು - Gadag distric rainfall news
ಗದಗ ಜಿಲ್ಲೆಯಾದ್ಯಂತ ಸುರಿದ ಮಳೆ ಭಾರಿ ಹಾನಿ ತಂದಿಟ್ಟಿದೆ. ಮಳೆಯಿಂದ ಹಲವಡೆ ಮನೆಗಳು ಕುಸಿದಿವೆ. ಮುಂಡರಗಿ ಪಟ್ಟಣದ ಹನುಮಂತ ಮೆದಕನಾಳ ಎಂಬುವರ ಮನೆ ಗೋಡೆ ಕುಸಿದು 5 ಕುರಿಗಳು ಸಾವನ್ನಪ್ಪಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
![ಗದಗ ಜಿಲ್ಲಾದ್ಯಂತ ಭಾರಿ ಮಳೆ; ಧರೆಗುರುಳಿದ ಮನೆಗಳು Heavy rainfall in Gadag distric](https://etvbharatimages.akamaized.net/etvbharat/prod-images/768-512-8948882-250-8948882-1601122625830.jpg)
ಭಾರಿ ಮಳೆಯಿಂದ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಯಲ್ಲಮ್ಮ ಕಟ್ಟಿಮನಿ ಅವರ ಮನೆಯ ಗೋಡೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಮುಂಡರಗಿ ಪಟ್ಟಣದ ಹನುಮಂತ ಮೆದಕನಾಳ ಎಂಬುವರ ಮನೆ ಗೋಡೆ ಕುಸಿದು 5 ಕುರಿಗಳು ಸಾವನ್ನಪ್ಪಿವೆ.
ಸುಮಾರು 20ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ. ಕುರಿ ಮಾಲೀಕ ಹನುಮಂತ, ಮನೆ ಪಕ್ಕದಲ್ಲಿಯೇ ಕುರಿಗಳ ಶೆಡ್ ನಿರ್ಮಿಸಿದ್ದರಿಂದ ಮಳೆಯಿಂದ ಗೋಡೆ ಕುಸಿದು ಈ ಹಾನಿ ಸಂಭವಿಸಿದೆ ಎನ್ನಲಾಗುತ್ತಿದೆ. ಇನ್ನು ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವೆಡೆ ಮನೆಗಳು ಧರೆಗುರುಳಿದ್ದು ಜನ ಬೀದಿಪಾಲಾಗುವಂತಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನೀರು ಹೊರಹಾಕುವಲ್ಲಿ ತಲ್ಲೀನರಾಗಿದ್ದಾರೆ.