ಕರ್ನಾಟಕ

karnataka

ETV Bharat / state

ಕೊರೆಯುವ ಚಳಿಯಲ್ಲಿ ಕಷ್ಟ ಪಡುವವರಿಗೆ ಹೊದಿಕೆಗಳನ್ನ ಕೊಡ್ತಿರುವ ವಿದ್ಯಾರ್ಥಿಗಳು..

ಎನ್​ಎಸ್​ಎಸ್ ಘಟಕದ ಸುಮಾರು 25ಕ್ಕೂ ವಿದ್ಯಾರ್ಥಿಗಳು ತಮಗೆ ಸಾಧ್ಯವಾದಷ್ಟು ಹಣವನ್ನು ಹಾಕಿ, ಹಾಗೇ ಸಂಸ್ಥೆಯಿಂದಲೂ ಸ್ವಲ್ಪ ಹಣ ಪಡೆದು ಹೊದಿಕೆಗಳನ್ನ ಖರೀದಿ ಮಾಡಿದ್ದಾರೆ. ಯಾರು ಚಳಿಯಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ಇವುಗಳನ್ನ ವಿತರಿಸುತ್ತಿದ್ದಾರೆ..

By

Published : Dec 26, 2021, 1:01 PM IST

gadaga students helps to those who are suffering from winter
ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದವರಿಗೆ ಬೆಚ್ಚನೆಯ ರಕ್ಷಣೆ ಕೊಟ್ಟ ಗದಗ ವಿದ್ಯಾರ್ಥಿಗಳು

ಗದಗ: ನಗರದಲ್ಲಿರುವ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣವೂ ಸೇರಿದಂತೆ ಎಲ್ಲೆಲ್ಲಿ ನಿರ್ಗತಿಕರು, ವೃದ್ಧ ಪ್ರಯಾಣಿಕರು, ಭಿಕ್ಷುಕರು ಚಳಿಯಿಂದ ನಡುಗುತ್ತಿರುತ್ತಾರೋ ಅಂತವರಿಗೆಲ್ಲ ವಿದ್ಯಾರ್ಥಿಗಳ ತಂಡವೊಂದು ಹೊದಿಕೆಗಳನ್ನ ನೀಡಿ ಸಮಾಜಮುಖಿ ಕೆಲಸ ಮಾಡ್ತಿದೆ.

ಕೊರೆಯುವ ಚಳಿಯಲ್ಲಿ ಕಷ್ಟ ಪಡುವವರಿಗೆ ಕಂಬಳಿ ಕೊಡುವ ಗದಗ ವಿದ್ಯಾರ್ಥಿಗಳ ತಂಡ..

ಈ ಬಾರಿ ವಿಪರೀತ ಚಳಿ ಇದೆ. ಅದೆಷ್ಟೋ ನಿರ್ಗತಿಕರು, ಭಿಕ್ಷುಕರು ತಮಗೊಂದು ಸೂರಿಲ್ಲದ ಕಾರಣ ಇಂತಹ ಕೊರೆಯುವ ಚಳಿಯಲ್ಲೇ ಇರುತ್ತಾರೆ. ಎಲ್ಲೋ ಬಸ್ ನಿಲ್ದಾಣವೋ, ರೈಲ್ವೆ ನಿಲ್ದಾಣದ ಆವರಣದಲ್ಲೋ ಇಲ್ಲ ಯಾವುದೋ ಮಠಗಳ ಆವರಣದಲ್ಲಿ ಕಾಲ ಕಳೆಯುತ್ತಿರುತ್ತಾರೆ. ಇವರ ಸಹಾಯಕ್ಕೆ ನಗರದ ಎಎಸ್​ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್​ಎಸ್​ಎಸ್ ಘಟಕದ ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಕಂಬಳಿ ವಿತರಣೆ :ಎನ್​ಎಸ್​ಎಸ್ ಘಟಕದ ಸುಮಾರು 25ಕ್ಕೂವಿದ್ಯಾರ್ಥಿಗಳು ತಮಗೆ ಸಾಧ್ಯವಾದಷ್ಟು ಹಣವನ್ನು ಹಾಕಿ, ಹಾಗೇ ಸಂಸ್ಥೆಯಿಂದಲೂ ಸ್ವಲ್ಪ ಹಣ ಪಡೆದು ಹೊದಿಕೆಗಳನ್ನ ಖರೀದಿ ಮಾಡಿದ್ದಾರೆ. ಯಾರು ಚಳಿಯಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ಇವುಗಳನ್ನ ವಿತರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದಲ್ಲಿ ವಿದ್ಯಾರ್ಥಿಗಳು ಈ ರೀತಿಯ ಸತ್ಕಾರ್ಯ ಮಾಡ್ತಿದ್ದಾರೆ.

ಪ್ರಯಾಣಿಕರಿಂದ ಮೆಚ್ಚುಗೆ :ಇನ್ನೂ ಕೆಲವು ಬಾರಿ ರೈಲು ಹಾಗೂ ಬಸ್ ತಪ್ಪಿದ್ದರಿಂದಾಗಿ ಮಕ್ಕಳು, ಮಹಿಳೆಯ, ಹಿರಿಯರು ಬಸ್ ನಿಲ್ದಾಣದಲ್ಲಿ ಕೊರೆಯುವ ಚಳಿಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೂ ಉಚಿತವಾಗಿ ಹೊದಿಕೆಗಳನ್ನ ನೀಡುತ್ತಾರೆ. ಇವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯೂ ಸಿಕ್ತಿದೆ.

ಇದನ್ನೂ ಓದಿ:ಪ್ರಧಾನಿ ತಮ್ಮ‌‌ ಪಕ್ಷದ ಪ್ರಚಾರಕ್ಕಾಗಿ ಸಾರ್ವಜನಿಕರ ಹಣ ಬಳಕೆ ಮಾಡುತ್ತಿದ್ದಾರೆ : ಖರ್ಗೆ ಕಿಡಿ

ABOUT THE AUTHOR

...view details