ಕರ್ನಾಟಕ

karnataka

ETV Bharat / state

ಕ್ವಾರಂಟೈನ್ ಬಿಟ್ಟು ಬೀದಿಯಲ್ಲಿ ತಿರುಗುತ್ತಿದ್ದವರಿಗೆ ಗದಗ ತಹಶೀಲ್ದಾರ್​ ಕ್ಲಾಸ್​​

ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ಸಿಬ್ಬಂದಿ ವರ್ಗ ವಿನಾ ಕಾರಣ ಮನೆ ಬಿಟ್ಟು ಓಡಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಕರೆ ತಂದು ಬೆಟಗೇರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಇರಿಸಿದ್ದಾರೆ.

By

Published : Jul 2, 2020, 7:39 PM IST

ಗದಗ ತಹಶೀಲ್ದಾರ್ ಕ್ಲಾಸ್​​
ಗದಗ ತಹಶೀಲ್ದಾರ್ ಕ್ಲಾಸ್​​

ಗದಗ: ಕ್ವಾರಂಟೈನ್​ನಲ್ಲಿದ್ದವರು ಬೀದಿಯಲ್ಲಿ ತಿರುಗುತ್ತಿರುವುದನ್ನು ಕಂಡ ತಹಶೀಲ್ದಾರ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.‌

14 ದಿನಗಳ ಕಾಲ ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕಾಗಿದ್ದವರು ನಿಯಮ ಉಲ್ಲಂಘಿಸಿ ಮನೆ ಬಿಟ್ಟು ತಿರುಗುತ್ತಿದ್ದವರನ್ನು ಪತ್ತೆ ಹಚ್ಚಿದ ತಹಶೀಲ್ದಾರ್​​ ಹಾಗೂ ಸಿಬ್ಬಂದಿ ವರ್ಗ, ಅವರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

ಗದಗ ತಹಶೀಲ್ದಾರ್ ಕ್ಲಾಸ್​​

ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ಸಿಬ್ಬಂದಿ ವರ್ಗ ಕೋಟುಮಚಗಿ, ಅಡವಿ ಸೋಮಾಪುರ ತಾಂಡಾ ಹಾಗೂ ನಾಗಾವಿ ತಾಂಡಾದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ವಿನಾ ಕಾರಣ ಮನೆ ಬಿಟ್ಟು ಓಡಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಕರೆ ತಂದು ಬೆಟಗೇರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಇರಿಸಿದ್ದಾರೆ.

ಬೇರೆ ಪ್ರದೇಶದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್​​ನಲ್ಲಿ ಇರಬೇಕಾಗಿದ್ದು ನಿಯಮ. ಆದರೆ ಈ ಮೂವರು ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿ ಕ್ವಾರಂಟೈನ್ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.

ABOUT THE AUTHOR

...view details