ಗದಗ :ಎರಡು ದಿನಗಳ ಹಿಂದೆ ಗದಗನ ಬೆಟಗೇರಿಯ ಶಾವಿ ಸಹೋದರಿಯರ ಜೀವನ ಹಾಗೂ ತಂದೆಗೆ ಪಾರ್ಶವಾಯು ಕಾಯಿಲೆಯ ಮಾತ್ರೆಗಳಿಗೂ ಗತಿ ಇಲ್ಲದ ಕುಟುಂಬದ ಕರುಣಾಜನಕ ಕಥೆ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. 'ಪಾರ್ಶ್ವವಾಯುನಿಂದ ಬಳಲುತ್ತಿರುವ ತಂದೆ, ಕುಟುಂಬಕ್ಕೀಗ ಹೆಣ್ಣುಮಕ್ಕಳೇ ಆಧಾರ' ಎಂಬ ಶೀರ್ಷಿಕೆಯಡಿ ಪ್ರತ್ಯಕ್ಷ ವರದಿ ಮಾಡಿ ಬೆಳಕು ಚೆಲ್ಲಿತ್ತು. ಇದನ್ನ ನೋಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ, ಆ ಬಡ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ಒದಗಿಸಲು ನಿರ್ಧರಿಸಿದ್ದಾರೆ.
ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ನೋಡಿ ಗದಗ ಬಿಜೆಪಿ ಮುಖಂಡ ಪ್ರಶಾಂತ್ ನಾಯ್ಕರ್ ಅವರಿಗೆ ಸೂಚನೆ ನೀಡಿ ಆ ಕುಟುಂಬದ ತೊಂದರೆ ಹೋಗಲಾಡಿಸೋ ನಿಟ್ಟಿನಲ್ಲಿ ಎಷ್ಟೇ ಹಣದ ಖರ್ಚಾದರೂ ಅದನ್ನ ಭರಿಸೋದಾಗಿ ಹೇಳಿದ್ದರು. ಅವರ ಮನೆಗೆ ಹೋಗಿ ಅವರ ಸಮಸ್ಯೆ ಬಗೆಹರಿಸಲು ಸಚಿವರು ಸೂಚಿಸಿದ್ದರು.