ಕರ್ನಾಟಕ

karnataka

ಗದಗದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿದ ಭುವನ್, ಹರ್ಷಿಕಾ ಪೂಣಚ್ಚ

By

Published : Jun 14, 2021, 8:50 AM IST

ಭುವನಂ ಫೌಂಡೇಶನ್ ವತಿಯಿಂದ ನಟ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಗದಗ ನಗರಕ್ಕೆ ಭೇಟಿ ನೀಡಿ ಅನೇಕ ಬಡ ಜನರಿಗೆ ದಿನಸಿ ಕಿಟ್​ ವಿತರಿಸಿದರು.

Bhuvan and actress Harshika Poonacha who did not distribute the kit to the poor
ಕಿಟ್ ವಿತರಿಸದ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚ

ಗದಗ: ಭುವನಂ ಫೌಂಡೇಶನ್ ವತಿಯಿಂದ ಚಿತ್ರನಟರಾದ ಭುವನ್ ಮತ್ತು ಹರ್ಷಿಕಾ ಪೂಣಚ್ಚ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿ ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ, ದಿನಸಿ‌ ಕಿಟ್ ವಿತರಿಸುತ್ತಿದ್ದಾರೆ.

ಕಿಟ್ ವಿತರಿಸದ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚ

"ಇಲ್ಲಿಯವರೆಗೂ ಕರ್ನಾಟಕದಾದ್ಯಂತ ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಇನ್ನು ಮುಂದೆಯೂ ಮಾಡುತ್ತೇವೆ. ಇಂದು ಮತ್ತೆ ನಾಳೆ ದಾವಣಗೆರೆ, ಹುಬ್ಬಳ್ಳಿಯಲ್ಲಿ ಕಿಟ್​ ವಿತರಣೆ ಮಾಡಲಿದ್ದು, ನಂತರ ಮೈಸೂರು, ಕೊಡಗಿನಲ್ಲಿ ಈ ಕಾರ್ಯ ಮುಂದುವರೆಸಲಿದ್ದೇವೆ. ಇದರ ನಂತರ ವ್ಯಾಕ್ಸಿನೇಷನ್​ ಡ್ರೈವ್​ಗೆ ಪ್ಲ್ಯಾನ್​ ಮಾಡಿಕೊಂಡಿದ್ದೇವೆ."

"ಗದಗ ನಮಗೆ ಎರಡನೇ ತವರೂರು ಇದ್ದಂತೆ. ಇಲ್ಲಿ ನಮ್ಮ ಸಿನಿಮಾಗಳಿಗೆ ಬಹಳಷ್ಟು ಪ್ರೋತ್ಸಾಹ ಸಿಕ್ಕಿದೆ. ಹೀಗಾಗಿ ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಣ್ಣ ಪ್ರಯತ್ನವಿದು. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಹೀಗೆಯೇ ಇರಲಿ."

- ನಟ ಭುವನ್

ABOUT THE AUTHOR

...view details