ಕರ್ನಾಟಕ

karnataka

ETV Bharat / state

ಗದಗದಲ್ಲಿ ವಿಧವೆಗೆ ಥಳಿಸಿದ ಆರೋಪ: ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಅಸಮಾಧಾನ - ವಿಧವೆ ಮೇಲೆ ಹಲ್ಲೆ

ಗಂಡನನ್ನು ಕಳೆದುಕೊಂಡ ದ್ರಾಕ್ಷಾಯಣಿ ಹೋಟೆಲ್​ ನಡೆಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಆದ್ರೆ, ಮತ್ತೊಂದು ಹೋಟೆಲ್​​ನವರು ಇವರಿಗೆ ಗಿರಾಕಿಗಳ ಜೊತೆಗೆ ಅನೈತಿಕ ಸಂಬಂಧದ ಪಟ್ಟ ಕಟ್ಟಿ, ಅರೆಬೆತ್ತಲೆ ಮಾಡಿ ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

assault on widow at gadaga
ಗದಗದಲ್ಲಿ ವಿಧವೆ ಮೇಲೆ ಹಲ್ಲೆ ಪ್ರಕರಣ

By

Published : Oct 20, 2021, 7:28 AM IST

ಗದಗ:ಗಂಡನನ್ನು ಕಳೆದುಕೊಂಡ ಮಹಿಳೆಯೋರ್ವರು ಚಿಕ್ಕ ಹೋಟೆಲ್​​ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಮತ್ತೊಂದು ಹೋಟೆಲ್​​ನವರು ಇವರಿಗೆ, ಹೋಟೆಲ್​ಗೆ ಬರುವವರೊಂದಿಗೆ ಸಂಬಂಧ ಕಟ್ಟಿ ಹಿಂಸೆ ನೀಡಿದ್ದಾರೆ. ನಿನ್ನೆ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದು, ರಕ್ಷಣೆಗೆ ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಗದಗದಲ್ಲಿ ವಿಧವೆ ಮೇಲೆ ಹಲ್ಲೆ ಪ್ರಕರಣ

ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿಯಲ್ಲಿ ಮೊನ್ನೆ ನಡೆದ ಘಟನೆ. ಹಳ್ಳಿಕೇರಿ ಗ್ರಾಮದ ಮಹಿಳೆ ದ್ರಾಕ್ಷಾಯಣಿ ತನ್ನ ಗಂಡನನ್ನು ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಇವರು ಚಿಕ್ಕ ಹೋಟೆಲ್​​ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಹೋಟೆಲ್ ಎದುರಿರುವ ಇನ್ನೊಂದು ಹೋಟೆಲ್ ಮಾಲೀಕರು ಇವರ ಮೇಲೆ ಹೋಟೆಲ್​​ಗೆ ಬರುವ ಗಿರಾಕಿಗಳ ಜೊತೆಗೆ ಅನೈತಿಕ ಸಂಬಂಧ ಕಟ್ಟಿದ್ದಾರೆಂದು ಹಲ್ಲೆಗೊಳಗಾದ ದ್ರಾಕ್ಷಾಯಣಿ ಆರೋಪಿಸಿದ್ದಾರೆ.

ನಾಲ್ಕೈದು ಜನ ಪುರುಷರು, ಮಹಿಳೆಯರು ಸೇರಿ ಅವರನ್ನು ಅರೆಬೆತ್ತಲೆಗೊಳಿಸಿ ನಡು ರಸ್ತೆಯಲ್ಲಿ ಎಳೆದೊಯ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಓರ್ವ ಗರ್ಭಿಣಿ ಕೂಡ ಇದ್ದರು ಎಂದು ಹೇಳಲಾಗಿದೆ.

ಗಾಯಗೊಂಡ ಮಹಿಳೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮುಂಡರಗಿ ಪೊಲೀಸರು ನಮ್ಮ ರಕ್ಷಣೆಗೆ ಬರುತ್ತಿಲ್ಲವೆಂದು ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:'ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ಧ ಸಿದ್ದರಾಮಯ್ಯ ವಚನಭ್ರಷ್ಟರಾದರು'

ABOUT THE AUTHOR

...view details