ಗದಗ :ತಮ್ಮ ಹಿಂಡಿನಲ್ಲಿನ ಹಿರಿಯ ಹಸುವೊಂದು ಅನಾರೋಗ್ಯದಿಂದ ಮೃತಪಟ್ಟರೆ ಅದರ ಮಕ್ಕಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಕಣ್ಣೀರು ಹಾಕಿದ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಸಿದ್ದೇಶ್ವರ ಪಂಚ ಗೃಹ ಹಿರೇಮಠದಲ್ಲಿ ನಡೆದಿದೆ.
ನಿನ್ನೆ ಅನಾರೋಗ್ಯದಿಂದ ಮಠದ ಗೋಶಾಲೆಯ ಹಿರಿಯ ಹಸು ಗೌರಿ ಸಾವನ್ನಪ್ಪಿತ್ತು. ಮಠದ ಸ್ವಾಮೀಜಿಗಳು ಮತ್ತು ಊರಿನ ಪ್ರಮುಖರು ಸೇರಿ ಹಿಂದೂ ಸಂಪ್ರದಾಯದಂತೆ ಪೂಜ್ಯ ಭಾವನೆಯಿಂದ ಕಾಣುವ ಮೃತ ಗೌರಿಯನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಈ ವೇಳೆ, ಅದರ ಮಕ್ಕಳು ಮತ್ತು ಇತರ ಹಸುಗಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ.