ಗದಗ:ಕೈಗಳಿಂದ ಮಲ ತೆಗೆಯುವ ಮತ್ತು ಮಲ ಹೊರುವ ಪದ್ದತಿಗಳನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದ್ದರೂ, ಗದಗದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
ಬೆಟಗೇರಿ ಅಂಡರ್ ಬ್ರಿಡ್ಜ್ನ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ಪೌರಕಾರ್ಮಿಕರೊಬ್ಬರ ಕೈಯಿಂದ ಮಲ ತೆಗಿಸಲಾಗಿದೆ.
ಗದಗ:ಕೈಗಳಿಂದ ಮಲ ತೆಗೆಯುವ ಮತ್ತು ಮಲ ಹೊರುವ ಪದ್ದತಿಗಳನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದ್ದರೂ, ಗದಗದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
ಬೆಟಗೇರಿ ಅಂಡರ್ ಬ್ರಿಡ್ಜ್ನ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ಪೌರಕಾರ್ಮಿಕರೊಬ್ಬರ ಕೈಯಿಂದ ಮಲ ತೆಗಿಸಲಾಗಿದೆ.
ಕೆಲವು ಕಿಡಿಗೇಡಿಗಳು, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆಯೇ ಪೌರಕಾರ್ಮಿಕನ ಕೈಯಿಂದ ಮಲವನ್ನು ಸ್ವಚ್ಚಗೊಳಿಸುವ ಕೆಲಸ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗದಗ ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಕೆಲಸ ಮಾಡಿಸಿರುವ ಜನರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರರು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪೌರ ಕಾರ್ಮಿಕ ಸಂಘಟನೆಗಳೂ ಘಟನೆಗೆ ವಿರೋಧ ವ್ಯಕ್ತಪಡಿಸಿವೆ.