ಕರ್ನಾಟಕ

karnataka

ETV Bharat / state

ಕೈಯಿಂದ ಮಲ ತೆಗೆಸುವ ಪದ್ದತಿ ಇನ್ನೂ ಜೀವಂತ! ಗದಗಿನಲ್ಲಿ ಅಮಾನವೀಯ ಘಟನೆ - undefined

ಗದಗಿನ ಬೆಟಗೇರಿ ಅಂಡರ್ ಬ್ರಿಡ್ಜ್‌ ಹತ್ತಿರ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಪೌರಕಾರ್ಮಿಕನೊಬ್ಬ ಕೈಯಿಂದ ಮಲ ಸ್ವಚ್ಚಗೊಳಿಸಲಾಗಿರುವ ಘಟನೆ ನಿಜಕ್ಕೂ ನಾಚಿಕೆಗೇಡು!

ಗದಗ

By

Published : Apr 27, 2019, 5:12 PM IST

ಗದಗ:ಕೈಗಳಿಂದ ಮಲ ತೆಗೆಯುವ ಮತ್ತು ಮಲ ಹೊರುವ ಪದ್ದತಿಗಳನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದ್ದರೂ, ಗದಗದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಬೆಟಗೇರಿ ಅಂಡರ್‌ ಬ್ರಿಡ್ಜ್‌ನ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಘಟನೆ ನಡೆದಿದ್ದು, ಪೌರಕಾರ್ಮಿಕರೊಬ್ಬರ ಕೈಯಿಂದ ಮಲ ತೆಗಿಸಲಾಗಿದೆ.

ಈ ಪದ್ದತಿಗೆ ಕೊನೆ ಎಂದು..?

ಕೆಲವು ಕಿಡಿಗೇಡಿಗಳು, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆಯೇ ಪೌರಕಾರ್ಮಿಕನ ಕೈಯಿಂದ ಮಲವನ್ನು ಸ್ವಚ್ಚಗೊಳಿಸುವ ಕೆಲಸ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗದಗ ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಕೆಲಸ ಮಾಡಿಸಿರುವ ಜನರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರರು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪೌರ ಕಾರ್ಮಿಕ ಸಂಘಟನೆಗಳೂ ಘಟನೆಗೆ ವಿರೋಧ ವ್ಯಕ್ತಪಡಿಸಿವೆ.

For All Latest Updates

TAGGED:

ABOUT THE AUTHOR

...view details