ಗದಗ:ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..! - Gadag News
ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
![ಲಾಕ್ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..! A farmer grows Vegetables during lockdown](https://etvbharatimages.akamaized.net/etvbharat/prod-images/768-512-8168858-989-8168858-1595681420653.jpg)
ಲಾಕ್ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..!
ಲಾಕ್ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..!
ಶಿಗ್ಲಿ ಗ್ರಾಮದಲ್ಲಿ ಕೆಲವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಗ್ರಾಮವನ್ನು ಸೀಲ್ಡೌನ್ ಮಾಡಲಾಗಿತ್ತು. ಈ ವೇಳೆ ಸ್ಥಳೀಯರಿಗೆ ತರಕಾರಿ ಅಭಾವ ಉಂಟಾಗಿತ್ತು. ಹೀಗಾಗಿ ತರಕಾರಿ ಬೆಳೆಯಲು ಯೋಚಿಸಿದ ಬಸಪ್ಪ, ತಮ್ಮ ಮನೆಯ ಅಂಗಳದಲ್ಲೇ ಬದನೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಹೀರೇಕಾಯಿ, ಅಲಸಂದೆ, ಹೆಸರುಕಾಳು, ಕೊತ್ತಂಬರಿ, ಹಾಗಲಕಾಯಿ, ಟೊಮ್ಯಾಟೊ, ಬೀನ್ಸ್, ವೀಳ್ಯದೆಲೆ ಹೀಗೆ ನಾನಾ ತರಹದ ಬೆಳೆಗಳನ್ನು ಬೆಳೆದಿದ್ದಾರೆ.
ಈ ತರಕಾರಿಗಳನ್ನು ಮಾರಿ ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬಸಪ್ಪ ಅವರ ಕೈತೋಟ ನೋಡಿ ಗ್ರಾಮದ ಜನರು ಕೂಡ ಬೇಷ್ ಎಂದಿದ್ದಾರೆ.