ETV Bharat Karnataka

ಕರ್ನಾಟಕ

karnataka

ETV Bharat / state

ಕಾನ್ಸ್​ಟೇಬಲ್ ನೇಮಕಾತಿಗೆ ವಯಸ್ಸಿನ ಮಿತಿ ಹೆಚ್ಚಿಸಿ: ಗೃಹ ಸಚಿವರಿಗೆ ಯುವಕನ ಪತ್ರ - ಕಾನ್ಸ್​ಟೇಬಲ್ ನೇಮಕಾತಿಗೆ ವಯಸ್ಸಿನ ಮಿತಿ ಹೆಚ್ಚಳಕ್ಕೆ ಆಗ್ರಹ

ಪಿಎಸ್ಐ ನೇಮಕಾತಿಗೆ ವಯಸ್ಸಿನ ಮಿತಿ ಹೆಚ್ಚಳ ಮಾಡಿದ್ದಾರೆ. ಅದೇ ರೀತಿ ಪೊಲೀಸ್ ಕಾನ್ಸ್​ಟೇಬಲ್ ಮಿತಿ ಹೆಚ್ಚಳ ಮಾಡಬೇಕು ಎಂದು ತಾಲೂಕಿನ‌ ತಿಮ್ಮಾಪೂರ ಗ್ರಾಮದ ಯುವಕನೊಬ್ಬ ಗೃಹ ಸಚಿವರಿಗೆ ಪತ್ರ ಬರೆದಿದ್ದಾನೆ.

ಗೃಹ ಸಚಿವರಿಗೆ ಪತ್ರ ಬರೆದ ಯುವಕ
ಗೃಹ ಸಚಿವರಿಗೆ ಪತ್ರ ಬರೆದ ಯುವಕ
author img

By

Published : Apr 9, 2021, 8:00 AM IST

ಧಾರವಾಡ:ಪೊಲೀಸ್ ಕಾನ್ಸ್​ಟೇಬಲ್ ನೇಮಕಾತಿಗೆ ವಯಸ್ಸಿನ ಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಧಾರವಾಡದ ಯುವಕನೋರ್ವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

ಗೃಹ ಸಚಿವರಿಗೆ ಪತ್ರ ಬರೆದ ಯುವಕ

ತಾಲೂಕಿನ‌ ತಿಮ್ಮಾಪೂರ ಗ್ರಾಮದ ಯುವಕ ಮೈಲಾರ ಕಳೆದ ಮೂರು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದಾರೆ. ಒಂದೆರಡು ಸಲ ಕೆಲ ಅಂಕಗಳಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಹೀಗಾಗಿ ಇದೇ ಏಪ್ರಿಲ್ 25 ರಂದು ಆತನ ವಯೋಮಿತಿ ಮುಕ್ತಾಯಗೊಳ್ಳುತ್ತದೆ. ಅಷ್ಟರೊಳಗೆ ವಯಸ್ಸಿನ ಮಿತಿ ಹೆಚ್ಚಳ ಮಾಡಬೇಕು. ಇಲ್ಲವೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಿಎಸ್ಐ ನೇಮಕಾತಿಗೆ ವಯಸ್ಸಿನ ಮಿತಿ ಹೆಚ್ಚಳ ಮಾಡಿದ್ದು, ಅದೇ ರೀತಿ ಪೊಲೀಸ್ ಕಾನ್ಸ್​ಟೇಬಲ್‌ಗೂ ಮಾಡಬೇಕು. ಇಲ್ಲದಿದ್ದಲ್ಲಿ ನನ್ನ ಸಾವಿಗೆ ಸರ್ಕಾರ ಹಾಗೂ ಗೃಹ ಸಚಿವರೇ ಕಾರಣರಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸಾಲ ಮಾಡಿ ಲಾಟರಿ ಖರೀದಿಸಿದ್ದ ವಾಚ್​ಮ್ಯಾನ್​ಗೆ 1 ಕೋಟಿ ರೂ. ಲಾಟ್ರಿ ಬಹುಮಾನ!

For All Latest Updates

ABOUT THE AUTHOR

...view details