ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶ್ರುತಿ: ನಿನ್ನೆ ಪಡೆದ ಪ್ರಶಸ್ತಿಯನ್ನು ತಾಲೂಕು ಆಡಳಿತಕ್ಕೆ ಮರಳಿಸಿದ ಯುವಕ - ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಮರಳಿಸಿದ ಯುವಕ

ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಶಸ್ತಿ ವಿತರಣೆಯಲ್ಲಿ ಗೊಂದಲವುಂಟಾದ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಯುವಕ ಪ್ರಶಸ್ತಿ ಮರಳಿಸಿದ್ದಾನೆ.

Young man returned his award
ಪ್ರಶಸ್ತಿಯನ್ನು ತಾಲೂಕಾಡಳಿತಕ್ಕೆ ಮರಳಿಸಿದ ಯುವಕ

By

Published : Apr 10, 2021, 4:09 PM IST

ಹುಬ್ಬಳ್ಳಿ:ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಮನವಿ ಸಲ್ಲಿಸಲು ಹೋದ ಯುವಕನಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ನಿನ್ನೆ ಪಡೆದ ಪ್ರಶಸ್ತಿಯನ್ನು ಯುವಕ ಇಂದು ತಾಲೂಕು ಆಡಳಿತಕ್ಕೆ ಮರಳಿಸಿದ್ದಾನೆ.

ಬಸವರಾಜ್ ಯೋಗಪ್ಪನವರ್

ನಿನ್ನೆ ನಗರಗ ಗೋಕುಲ್ ರಸ್ತೆಯ ಖಾಸಗಿ ಹೊಟೇಲ್​ನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2020-21ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನವಿ ಸಲ್ಲಿಸಲು ಹೋದ ಕುಂದಗೋಳ ತಾಲೂಕಿನ ಬಸವರಾಜ್ ಯೋಗಪ್ಪನವರ್ ಎಂಬ ಯುವಕನಿಗೆ ಸಾಧಕ ಪ್ರಶಸ್ತಿ ನೀಡುವ ಮೂಲಕ
ಗ್ರಾಮೀಣಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿತ್ತು. ಈ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಅಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಯುವಕ ತಾನು ಪಡೆದ ಪ್ರಶಸ್ತಿಯನ್ನು ತಾಲೂಕು ಆಡಳಿತಕ್ಕೆ ಮರಳಿಸಿದ್ದಾನೆ.

ಪ್ರಶಸ್ತಿಯೊಂದಿಗೆ ತಾಲೂಕು ಕಚೇರಿಗೆ ಬಂದ ಯುವಕ

ಇದನ್ನೂ ಓದಿ : ಮನವಿ ಸಲ್ಲಿಸಲು ಹೋದ ಯುವಕನಿಗೂ ಒಲಿದು ಬಂತು ರಾಜ್ಯ ಮಟ್ಟದ ಪ್ರಶಸ್ತಿ!

ಇದು ಸಾಧಕರಿಗೆ ಸಿಗಬೇಕಾಗಿರುವ ಪ್ರಶಸ್ತಿ. ನಾನು ಮನವಿ‌ ಕೊಡಲು ಹೋದಾಗ ನನಗೂ ಪ್ರಶಸ್ತಿ ನೀಡಿದ್ದರು. ಹಾಗಾಗಿ ಇದು ಯೋಗ್ಯ ವ್ಯಕ್ತಿಗೆ ತಲುಪಲಿ ಎಂಬ ಕಾರಣದಿಂದ ಪ್ರಶಸ್ತಿ ಮರಳಿಸುತ್ತಿದ್ದೇನೆ ಎಂದು ಬಸವರಾಜ್ ಯೋಗಪ್ಪನವರ್ ತಿಳಿಸಿದ್ದಾರೆ.

ABOUT THE AUTHOR

...view details