ಕರ್ನಾಟಕ

karnataka

ವಿನಯ ಕುಲಕರ್ಣಿ ಬಂಧನಕ್ಕೂ, ಬಿಎಸ್​ವೈ ಆ ಹೇಳಿಕೆಗೂ ಇದೆಯಾ ನಂಟು!?

By

Published : Nov 7, 2020, 11:10 AM IST

Updated : Nov 7, 2020, 11:16 AM IST

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ವೇಳೆ ಸಿಎಂ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಈಗ ಪುಷ್ಠಿ ನೀಡಿದಂತಾಗಿದೆ.

yadiyurappa told about vinay kulkarni arrest in 2018  2018ರಲ್ಲಿ ವಿನಯ ಕುಲಕರ್ಣಿ ಬಂಧನದ ಬಗ್ಗೆ ಯಡಿಯೂರಪ್ಪ ಹೇಳಿಕೆ
2018ರಲ್ಲಿ ವಿನಯ ಕುಲಕರ್ಣಿ ಬಂಧನದ ಬಗ್ಗೆ ಯಡಿಯೂರಪ್ಪ ಹೇಳಿಕೆ

ಹುಬ್ಬಳ್ಳಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಕುರಿತು ಈ ಹಿಂದೆ ಸಿಎಂ ಯಡಿಯೂರಪ್ಪ ನೀಡಿದ್ದ ಹೇಳಿಕೆ ಈಗ ನಿಜವಾಯ್ತಾ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ವಿನಯ ಕುಲಕರ್ಣಿ ಬಂಧನಕ್ಕೂ, ಬಿಎಸ್​ವೈ ಆ ಹೇಳಿಕೆಗೂ ಇದೆಯಾ ನಂಟು!?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿಯವರಿಗೆ ತಕ್ಕ ಶಿಕ್ಷೆ ಮಾಡದಿದ್ದರೆ ನನ್ನನ್ನ ಯಡಿಯೂರಪ್ಪ ಅಂತ ಕರೆಯಬೇಡಿ ಎಂದಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ವೇಳೆ ಹೇಳಿದ್ದ ಹೇಳಿಕೆಗೆ ಈಗ ಪುಷ್ಠಿ ನೀಡಿದಂತಾಗಿದೆ.

ಚುನಾವಣೆಯ ಬಳಿಕ ಸಿಎಂ ಆದ ನಂತರ ಯಡಿಯೂರಪ್ಪ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಈಗ ಮಾಜಿ ಸಚಿವ ವಿನಯ‌ ಕುಲಕರ್ಣಿ ಬಂಧನವಾಗಿದ್ದು, ಸಿಎಂ‌ ಯಡಿಯೂರಪ್ಪ ತಾವು ಹೇಳಿದಂತೆಯೇ ಮಾಡಿದರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Last Updated : Nov 7, 2020, 11:16 AM IST

For All Latest Updates

TAGGED:

ABOUT THE AUTHOR

...view details