ಕರ್ನಾಟಕ

karnataka

ETV Bharat / state

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಉ.ಕ. ಮಹಿಳೆಯರಿಂದ ನೈತಿಕ ಬೆಂಬಲ - undefined

ಮಂಡ್ಯ ಜಿಲ್ಲೆಯಾದ್ಯಂತ ಸುಮಲತಾ ಅಂಬರೀಶ್​ ಚುನಾವಣಾ ಅಬ್ಬರ ಜೋರಾಗಿದೆ. ಹಾಗೆಯೇ ಧಾರವಾಡದಲ್ಲಿಯೂ ಸುಮಲತಾ ಅವರನ್ನು ಬೆಂಬಲಿಸಿ ಮಹಿಳೆಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ ಬೆಂಬಲಿಸಿ ಸಭೆ

By

Published : Apr 14, 2019, 4:13 PM IST

ಧಾರವಾಡ: ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಲ್ಲಿ ಸುಮಲತಾ ಅಂಬರೀಶ್​ ಮತ್ತು ಸಿಎಂ ಪುತ್ರ ನಿಖಿಲ್​ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ವಿದ್ಯಾನಗರಿ ಧಾರವಾಡದಲ್ಲಿ ಮಹಿಳಾ ಜೈ ಎಂದಿದ್ದಾರೆ.


ಹೌದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳೆಯರ ಸಂಘದಿಂದ ಧಾರವಾಡದಲ್ಲಿ ನಾರಿಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ್​ ಬೆಂಬಲಿಸಿ ಮಹಿಳೆಯರ ಸಭೆ
ಧಾರವಾಡದ ಜಯನಗರ ಉದ್ಯಾನದಲ್ಲಿ ಈ ಸಭೆ ನಡೆದಿದ್ದು, ಸುಮಲತಾ ದಿಟ್ಟ ಮಹಿಳೆಯಾಗಿ ಸ್ಪರ್ಧೆಗಿಳಿದಿದ್ದು, ಅವರ ಪರ ರಾಜ್ಯದ ಮಹಿಳೆಯರೆಲ್ಲ ನಿಲ್ಲುವಂತೆ ಸಭೆ ಮೂಲಕ ಆಗ್ರಹಿಸಲಾಯಿತು. ಮಂಡ್ಯದಲ್ಲಿ ಈ ಮಹಿಳೆಯರ ಮತ ಇಲ್ಲದೇ ಇದ್ದರೂ ನೈತಿಕ ಬೆಂಬಲದ ಮೂಲಕ ಸುಮಲತಾಗೆ ಶಕ್ತಿ ತುಂಬಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

For All Latest Updates

TAGGED:

ABOUT THE AUTHOR

...view details