ಕರ್ನಾಟಕ

karnataka

By

Published : Feb 15, 2022, 1:28 PM IST

ETV Bharat / state

ಪತಿಗೆ ಜೀವ ಬೆದರಿಕೆ ಹಾಕಿದ ಪತ್ನಿ!

ಕಸ್ತೂರೆವ್ವನ ಜೊತೆ ಅವರ ತಂಗಿ ಲತಾ ಸತೀಶ್ ಎರಪೆಲ ಮತ್ತು ತಂಗಿಯ ಗಂಡ ಸತೀಶ್ ಎರಪೆಲ ಎಂಬುವರು ಸೇರಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ..

Hubli police station
ಪತಿಗೆ ಜೀವ ಬೆದರಿಕೆ ಹಾಕಿದ ಪತ್ನಿ ದೂರು ದಾಖಲು

ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಪತ್ನಿಯೇ ಪತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೇ ಜೀವ ಬೆದರಿಕೆ ಹಾಕಿರುವ ಪ್ರಕರಣ ನವನಗರದ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿದಾಖಲಾಗಿದೆ.

ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲೋನಿ ನಿವಾಸಿ ಕಸ್ತೂರೆವ್ವ ಗೋಕಾವಿ ಎಂಬಾಕೆ ತನ್ನ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ. ಪತಿ ಬಸವರಾಜ ಗೋಕಾವಿ ಅವರನ್ನು ಮೊದಲು ಮನೆಯಲ್ಲಿ ಕೂಡಿ ಹಾಕಿ ಹೊರಗಡೆಯಿಂದ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮನೆಯ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಕಸ್ತೂರೆವ್ವನ ಜೊತೆ ಅವರ ತಂಗಿ ಲತಾ ಸತೀಶ್ ಎರಪೆಲ ಮತ್ತು ತಂಗಿಯ ಗಂಡ ಸತೀಶ್ ಎರಪೆಲ ಎಂಬುವರು ಸೇರಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್​: ಹುಬ್ಬಳ್ಳಿಯ ಗೌಳಿ ಕ್ರಾಸ್‌ನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಕ್ಕೆ ಬೆಟ್ಟಿಂಗ್ ಆಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಸ್‌ನಲ್ಲಿ ಪರ್ಸ್ ಎಸ್ಕೇಪ್ ಮಾಡಿದ ಕಳ್ಳರು : ಹುಬ್ಬಳ್ಳಿಯ ಸಿಬಿಟಿಗೆ ಹೋಗವಾಗ ಬಸ್‌ನಲ್ಲಿ ಇಬ್ಬರು ಕಳ್ಳರು ಪರ್ಸ್ ಕಳ್ಳತನ ಮಾಡಿದ್ದಾರೆ ಎಂದು ಮಹಿಳೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಸ್‌ನಿಂದ ಇಳಿಯುವಾಗ ಮಹಿಳೆಯ ಬ್ಯಾಗ್​ನಿಂದ ಪರ್ಸ್​ ಅನ್ನು ಕಳವು ಮಾಡಿದ್ದಾರೆ. ಪರ್ಸ್​ನಲ್ಲಿ 4 ಗ್ರಾಂ ಬಂಗಾರ, 9 ಸಾವಿರ ಮೌಲ್ಯದ ಕಿವಿ ಓಲೆ, ₹35 ಸಾವಿರ ಹಣ ಇತ್ತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಚಿತ್ರದುರ್ಗ: ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತಿ

ABOUT THE AUTHOR

...view details