ಕರ್ನಾಟಕ

karnataka

ಐಸಿಸ್​ ಉಗ್ರ ಸಂಘಟನೆಯೊಂದಿಗೆ ನಂಟಿರುವ ಶಂಕಿತರ ಸೆರೆ ವಿಚಾರ.. ದೆಹಲಿ‌ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ: ಹು-ಧಾ ಪೊಲೀಸ್ ಕಮಿಷನರ್

By ETV Bharat Karnataka Team

Published : Oct 3, 2023, 1:57 PM IST

Updated : Oct 3, 2023, 2:38 PM IST

''ದೆಹಲಿ‌ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಜೊತೆಗೆ ಉನ್ನತ ಮಟ್ಟದಲ್ಲಿ ನಾವು ದೆಹಲಿ ಪೊಲೀಸರ ಜೊತೆ ಚರ್ಚೆಯಲ್ಲಿ ತೊಡಗಿದ್ದೇವೆ ಎಂದು ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಮಾಹಿತಿ ನೀಡಿದರು.

Hubli- Dharwad Police Commissioner
ಉಗ್ರ ಸಂಘಟನೆಯೊಂದಿಗೆ ನಂಟಿರುವ ಉಗ್ರರರ ಸೆರೆ ವಿಚಾರ: ದೆಹಲಿ‌ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ: ಹು-ಧಾ ಪೊಲೀಸ್ ಕಮಿಷನರ್

ಉಗ್ರ ಸಂಘಟನೆಯೊಂದಿಗೆ ನಂಟಿರುವ ಶಂಕಿತರ ಸೆರೆ ವಿಚಾರ: ದೆಹಲಿ‌ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ: ಹು-ಧಾ ಪೊಲೀಸ್ ಕಮಿಷನರ್

ಹುಬ್ಬಳ್ಳಿ:''ದೆಹಲಿ ಪೊಲೀಸರು ಹಾಗೂ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಶಂಕಿತ ಉಗ್ರರ ಪ್ರಕರಣದಲ್ಲಿ ಹುಬ್ಬಳ್ಳಿ- ಧಾರವಾಡ ಹೆಸರು ಕೇಳಿಬಂದಿದ್ದರಿಂದ ನಾವು ಈ ಕುರಿತಂತೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದೇವೆ'' ಎಂದು ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ.

ನಗರದಲ್ಲಿ ಇಂದು (ಮಂಗಳವಾರ) ಮಾತನಾಡಿದ ಅವರು, ಇಸ್ಲಾಮಿಕ್ ಸ್ಟೇಟ್ (ಐಸಿಸ್​) ಉಗ್ರ ಸಂಘಟನೆಯ ಸಂಘಟನೆಯೊಂದಿಗೆ ನಂಟು ಹೊಂದಿದ ಶಂಕಿತರನ್ನು ಸೆರೆ ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿ, ''ಆದಾಗ್ಯೂ ನಾವು ದೆಹಲಿ ಪೊಲೀಸರ ಜೊತೆ ಹೈಲೆವೆಲ್ ಟಚ್​ನಲ್ಲಿ ಇದ್ದೇವೆ. ಆದರೆ, ಅಧಿಕೃತವಾಗಿ‌ ಇಲ್ಲಿ ತರಬೇತಿ ಪಡೆದಿದ್ದಾರಾ? ಅಥವಾ ಅವರು ಎಲ್ಲಿವರು ಅನ್ನೋ ಮಾಹಿತಿ ನಮಗೆ ಇಲ್ಲ. ನಮ್ಮ ಜೊತೆ ದೆಹಲಿ ಪೊಲೀಸರು ಯಾವುದೇ ಮಾಹಿತಿ ಶೇರ್ ಮಾಡಕೊಂಡಿಲ್ಲ. ಉನ್ನತ ಮಟ್ಟದಲ್ಲಿ ನಾವು ದೆಹಲಿ ಪೊಲೀಸರ ಜೊತೆ ಚರ್ಚೆಯಲ್ಲಿ ತೊಡಗಿದ್ದೇವೆ'' ಎಂದರು.

''ನ್ಯೂಸ್​ ಚಾನಲ್​ಗಳಲ್ಲಿ ಪ್ರಸಾರವಾದ ವಿಡಿಯೋದಲ್ಲಿ ಯಾವುದೇ ಸ್ಪೆಷಿಫಿಕ್ ಪ್ಲೇಸ್ ಹೇಳಿಲ್ಲ. ನಾವು ದೆಹಲಿ ಪೊಲೀಸರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಆದ್ರೆ ಅಧಿಕೃತವಾಗಿ ನಮಗೆ ದೆಹಲಿ ಪೊಲೀಸರು ಏನೂ ಹೇಳಿಲ್ಲ. ಅವರು ನಮ್ಮ‌ ಜೊತೆಗೆ ಯಾವ ಮಾಹಿತಿಯನ್ನೂ ಶೇರ್ ಮಾಡಿಕೊಂಡಿಲ್ಲ. ಈಗಾಗಲೇ ನಮ್ಮ ಪೊಲೀಸರು ಅಲರ್ಟ್ ಆಗಿದ್ದಾರೆ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಹೆಚ್ಚಿನ ಗುಪ್ತಚರ ಮಾಹಿತಿಯನ್ನೂ ಕಲೆಹಾಕುತ್ತಿದ್ದೇವೆ'' ಎಂದರು.

ನಿನ್ನೆ ಶಂಕಿತ ಐಸಿಸ್​ ಉಗ್ರ, ಗಣಿ ಎಂಜಿನಿಯರ್‌ ಶಹನವಾಜ್​ ಬಂಧನ- ದೆಹಲಿ ಪೊಲೀಸರ ಮಾಹಿತಿ:''ಪುಣೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಶಂಕಿತ ಐಸಿಸ್​ ಉಗ್ರ ಶಹನವಾಜ್​​ ಆಲಿಯಾಸ್​ ಶಫಿ ಉಜ್ಜಾಮನನ್ನು ದೆಹಲಿ ವಿಶೇಷ ಪೊಲೀಸ್​ ಪಡೆ ನಿನ್ನೆ (ಸೋಮವಾರ) ಬಂಧಿಸಿತ್ತು. ಶಂಕಿತ ಉಗ್ರ ತನ್ನ ಪತ್ನಿ ಬಸಂತಿ ಪಟೇಲ್​ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದ. ಈತ ಗಣಿ ಎಂಜಿನಿಯರ್​ ಆಗಿದ್ದ ಎಂಬ ಮಾಹಿತಿ ಕೂಡಾ ಬಹಿರಂಗವಾಗಿತ್ತು.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಚ್‌.ಎಸ್. ಧಲಿವಾಲ್ ಅವರು, ಶಂಕಿತ ಐಸಿಸ್ ಭಯೋತ್ಪಾದಕ ಶಹನವಾಜ್ ತನ್ನ ಪತ್ನಿ ಬಸಂತಿಯನ್ನು ಮರಿಯಮ್ ಆಗಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಈತನ ಜೊತೆಗೆ ಇನ್ನಿಬ್ಬರು ಮೋಸ್ಟ್​ ವಾಂಟೆಡ್​ ಉಗ್ರರನ್ನೂ ಬಂಧಿಸಲಾಗಿತ್ತು ಎಂದು ತಿಳಿಸಿದ್ದರು.

ಇದನ್ನೂ ಓದಿ:ಗಂಗಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ವ್ಯಕ್ತಿ ಸ್ಥಳದಲ್ಲೇ ಸಾವು

Last Updated : Oct 3, 2023, 2:38 PM IST

ABOUT THE AUTHOR

...view details