ಕರ್ನಾಟಕ

karnataka

ETV Bharat / state

ಮತದಾರರ ’’ಒಲವು - ವಿಶ್ವಾಸ ’’ಬಿಜೆಪಿ ಮೇಲಿದೆ : ಡಿಸಿಎಂ ಅಶ್ವತ್ಥ​​ ನಾರಾಯಣ - DCM Ashwath narayan

ನಮ್ಮ ಪಕ್ಷಕ್ಕೆ ಯಾರೇ ಸೇರ್ಪಗೊಂಡರೂ ಅವರಿಗೆ ಮುಕ್ತವಾದ ಸ್ವಾಗತವಿದೆ ಎಂದು ಡಿಸಿಎಂ ಅಶ್ವತ್ಥ​ ನಾರಾಯಣ​ ತಿಳಿಸಿದ್ದಾರೆ.

DCM Ashwath narayan
ಡಿಸಿಎಂ ಅಶ್ವತ್ಥ್​​ ನಾರಾಯಣ್.

By

Published : Oct 24, 2020, 2:48 PM IST

ಧಾರವಾಡ: ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಸರ್ಕಾರ ಜನಪರವಾಗಿದೆ. ಮತದಾರರ ಒಲವು ಹಾಗೂ ವಿಶ್ವಾಸ ಬಿಜೆಪಿ ಮೇಲಿದೆ ಎಂದು ಡಿಸಿಎಂ ಅಶ್ವತ್ಥ​​ ನಾರಾಯಣ​ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥ್​​ ನಾರಾಯಣ್​ ಮಾತನಾಡಿದರು

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವುದು ಖಚಿತ. ನಮ್ಮ ಪಕ್ಷಕ್ಕೆ ಯಾರೇ ಸೇರ್ಪಡೆಗೊಂಡರೂ ಅವರಿಗೆ ಮುಕ್ತವಾದ ಸ್ವಾಗತವಿದೆ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಯಾರೇ ಆಗಲಿ ಇಂತಹ ಹೇಳಿಕೆಗಳನ್ನ ಕೊಡಬಾರದು. ಬಹಿರಂಗವಾಗಿ ಈ ವಿಚಾರದ ಬಗ್ಗೆ ಮಾತನಾಡಲ್ಲ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಯತ್ನಾಳ್ ಅವರ ಸಂಪರ್ಕದಲ್ಲಿದ್ದಾರೆ. ಈ ವಿಚಾರದ ಬಗ್ಗೆ ಪಕ್ಷದ ನಾಯಕರು ಶಿಸ್ತಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮುಂದಿನ ಸಿಎಂ ಡಿಕೆಶಿ ಅಥವಾ ಸಿದ್ಧರಾಮಯ್ಯ ಎಂಬ ಕಾಂಗ್ರೆಸ್ ನವರ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನಲ್ಲಿ ಗುಂಪುಗಳು ಹಲವಾರು ಇವೆ. ಅವರ ಪಕ್ಷದಲ್ಲಿ ಒಗ್ಗಟ್ಟಿಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತೆ. ಈಗ ಇಬ್ಬರ ಹೆಸರು ಹೇಳಿದ್ದಾರೆ, ಇನ್ನೂ ಹಲವರ ಹೆಸರು ಹೇಳ್ತಾರೆ. ನಮ್ಮ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.

For All Latest Updates

ABOUT THE AUTHOR

...view details