ಕರ್ನಾಟಕ

karnataka

ವಿನಯ್​ಗೆ​ ಜಾಮೀನು ಸಿಕ್ಕಿರುವುದು ಬಹಳ ಖುಷಿ ತಂದಿದೆ: ವಿಜಯ್ ಕುಲಕರ್ಣಿ

By

Published : Aug 19, 2021, 9:59 PM IST

ವಿನಯ್​ ಕುಲಕರ್ಣಿಗೆ ಕೆಲ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಬೆಂಗಳೂರಿನಲ್ಲೇ ಇರಲಿದ್ದಾರೆ ಎಂದು ವಿಜಯ್ ಕುಲಕರ್ಣಿ ತಿಳಿಸಿದ್ದಾರೆ.

vijay-kulkarni-reaction-about-his-brother-vinays-bail
ವಿನಯ್​ಗೆ​ ಜಾಮೀನು ಸಿಕ್ಕಿರುವುದು ಬಹಳ ಖುಷಿ ತಂದಿದೆ: ವಿಜಯ್ ಕುಲಕರ್ಣಿ

ಹುಬ್ಬಳ್ಳಿ:ಸಹೋದರ ವಿನಯ್​ ಕುಲಕರ್ಣಿಗೆ ಜಾಮೀನು ಸಿಕ್ಕಿರುವುದು ಬಹಳ ಖುಷಿ ತಂದಿದೆ. ಅವರು ನಾಳೆ ಬೆಳಗ್ಗೆ 10 ಗಂಟೆಗೆ ಹಿಂಡಲಗಾ ಜೈಲಿನಿಂದ ಹೊರ ಬರುತ್ತಾರೆ. ಬೆಳಗಾವಿಯಿಂದ ಸವದತ್ತಿಗೆ ತೆರಳಲಿದ್ದಾರೆ ಎಂದು ವಿನಯ್ ಸಹೋದರ ವಿಜಯ್ ಕುಲಕರ್ಣಿ ಹೇಳಿದ್ದಾರೆ.

ವಿನಯ್​ ಕುಲಕರ್ಣಿಗೆ ಜಾಮೀನು ಸಿಕ್ಕ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು. ವಿನಯ್​ಗೆ ಕೆಲ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಬೆಂಗಳೂರಿನಲ್ಲೇ ಇರಲಿದ್ದಾರೆ. ಪ್ರಕರಣದಿಂದ ಅವರ ರಾಜಕೀಯ ಜೀವನಕ್ಕೆ ಹಿನ್ನಡೆ ಆಯಿತು ಎಂದು ಹೇಳುವವರು ಸ್ವಲ್ಪ ಸಮಯ ಕಾಯಬೇಕು.

ವಿನಯ್ ಸಕ್ರಿಯ ರಾಜಕೀಯಲ್ಲಿ ಇರುತ್ತಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿಜಯ್ ಹೇಳಿದರು.‌ ಸಿಬಿಐ ತನಿಖೆಗೆ ನಾವು ಸಹಕಾರ ನೀಡಿದ್ದೆವು. ಎಲ್ಲ ವಿಚಾರಣೆ ನಡೆಸಿದ ಬಳಿಕವೇ ನ್ಯಾಯಲಯವು ಜಾಮೀನು‌ ನೀಡಿದೆ. ನಮಗೆಲ್ಲಾ ಬಹಳ ಖುಷಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಈಗಲೂ ತಾಲಿಬಾನ್​ ಮುಕ್ತ ಆಫ್ಘನ್​ ಪ್ರಾಂತ್ಯವೊಂದಿದೆ.. ಯಾವುದು ಗೊತ್ತಾ?

ABOUT THE AUTHOR

...view details