ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆಗೆ ನೆಲಕಚ್ಚಿದ ಜೋಳದ ಬೆಳೆ: ರೈತರು ಕಂಗಾಲು - ಧಾರವಾಡ ಅಕಾಲಿಕ ಮಳೆಗೆ ಬೆಳೆ ಹಾನಿ

ಕವಲಗೇರಿ ಗ್ರಾಮದಲ್ಲಿ ರೈತರು ಬೆಳೆದ ಸಂಪೂರ್ಣ ಜೋಳದ ಬೆಳೆ ನೆಲಕಚ್ಚಿದೆ. ರಾತ್ರಿಯಿಡೀ ಬಿಡದೇ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಜೋಳ, ಕಡಲೆ, ಗೋಧಿ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. ಉತ್ತಮ ಫಸಲಿನ ಭರವಸೆ ಮೂಡಿಸಿದ್ದ ಜೋಳ ಮಣ್ಣುಪಾಲಾಗಿದೆ.

untimely-rain-destroyed-crop-in-dharwad-district
ನೆಲಕಚ್ಚಿದ ಜೋಳದ ಬೆಳೆ

By

Published : Jan 9, 2021, 4:04 PM IST

ಧಾರವಾಡ: ಹವಾಮಾನ‌ ಬದಲಾವಣೆಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ವರುಣನ ಆರ್ಭಟಕ್ಕೆ ರೈತ ಕಂಗಾಲಾಗಿ ಹೋಗಿದ್ದಾನೆ. ಮುಂಗಾರು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಈಗ ಹಿಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.

ನೆಲಕಚ್ಚಿದ ಜೋಳದ ಬೆಳೆ

ತಾಲೂಕಿನ ಕವಲಗೇರಿ ಗ್ರಾಮದಲ್ಲಿ ರೈತರು ಬೆಳೆದ ಸಂಪೂರ್ಣ ಜೋಳದ ಬೆಳೆ ನೆಲಕಚ್ಚಿದೆ. ರಾತ್ರಿಯಿಡೀ ಬಿಡದೆ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಜೋಳ, ಕಡಲೆ, ಗೋಧಿ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. ಉತ್ತಮ ಫಸಲಿನ ಭರವಸೆ ಮೂಡಿಸಿದ್ದ ಜೋಳ ಮಣ್ಣುಪಾಲಾಗಿದೆ.

ಓದಿ-ಡಿಸಿಎಂ ಸವದಿ ಜೊತೆ ವಂಚಕ ಯುವರಾಜ್ : ಫೋಟೋ ವೈರಲ್

ನವಲಗುಂದ ತಾಲೂಕಿನಲ್ಲಿ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಭತ್ತ, ಹತ್ತಿ, ಮೆಣಸಿನಕಾಯಿ, ಕಡಲೆ, ತರಕಾರಿ ಸೇರಿ ಹಲವು ಬೆಳೆ ಹಾನಿಗೀಡಾಗಿದ್ದು, ರೈತರಿಗೆ ತುಂಬಲಾರದ ನಷ್ಟವಾಗಿದೆ. ಸತತವಾಗಿ ಸುರಿದ ಮಳೆಯಿಂದ ಕಡಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತರಿಗೆ ಬರಸಿಡಿಲು ಬಡಿದಂತಾಗಿದೆ.

ABOUT THE AUTHOR

...view details