ಹುಬ್ಬಳ್ಳಿ:ಮಹಿಳೆಯೋರ್ವಳುಬಿಯರ್ ಬಾಟಲಿಯಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಲ್ಲೆ ಮಾಡಿದ ಮಹಿಳೆ ಆತನ ಪತ್ನಿಯಲ್ಲ, ಸಹೋದರಿ ಎಂದು ತಿಳಿದು ಬಂದಿದೆ.
ನಗರದ ಬಸವೇಶ್ವರ ಪಾರ್ಕ್ ನಿವಾಸಿ ಪ್ರಿಯದರ್ಶಿನಿ ಪಾಟೀಲ್ ತನ್ನ ಸಹೋದರ ಸಿದ್ಧಲಿಂಗಯ್ಯನ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಹಲ್ಲೆಗೊಳಗಾದ ಸಿದ್ದಲಿಂಗಯ್ಯ ಮನೆಯಲ್ಲಿ ವಯಸ್ಸಿಗೆ ಬಂದ ಸಹೋದರಿಯರಿದ್ದರೂ ಅವರ ಮದುವೆ ಬಗ್ಗೆ ಚಿಂತಿಸದೆ ಕುಡಿದು ಬಂದು ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಸಹೋದರಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ.