ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಹದಗೆಟ್ಟ ರಸ್ತೆಯಲ್ಲಿ ತುಳಸಿ ವಿವಾಹ ಮಾಡಿ ಪಾಲಿಕೆ ವಿರುದ್ದ ಆಕ್ರೋಶ.. - ಈಟಿವಿ ಭಾರತ ಕನ್ನಡ

ಹದಗೆಟ್ಟ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಮಹಿಳೆಯರು ಹಾಳಾಗಿರುವ ರಸ್ತೆಯ ಮೇಲೆ ತುಳಸಿ ವಿವಾಹ ಮಾಡುವ ಮೂಲಕ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Kn_hbl_03_tulasi_
ಹದಗೆಟ್ಟ ರಸ್ತೆಯಲ್ಲಿ ತುಳಸಿ ವಿವಾಹ

By

Published : Nov 5, 2022, 6:29 PM IST

ಹುಬ್ಬಳ್ಳಿ: ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಸರಿಪಡಿಸಿ ಎಂದು ಆಗ್ರಹಿಸಿ ಹದಗೆಟ್ಟ ರಸ್ತೆ ಮೇಲೆ ಮಹಿಳೆಯರು ತುಳಸಿ ವಿವಾಹವನ್ನು ಮಾಡಿ ಜನಪ್ರತಿನಿಧಿಗಳು ಮತ್ತು ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಗರದ ಗೋಪನಕೊಪ್ಪ ಗ್ರಾಮದ ಸ್ವಾಗತ ಕಾಲೋನಿಯ ಹದಗೆಟ್ಟ ರಸ್ತೆಯಲ್ಲಿಯೇ ಮಹಿಳೆಯರು ತುಳಸಿ ವಿವಾಹ ಮಾಡಿ, ಸಮರ್ಪಕ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪಾಲಿಕೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಈ ಕುರಿತು ಮಾತನಾಡಿರುವ ಸ್ಥಳೀಯ ನಿವಾಸಿ ಸವಿತಾ, ಮಳೆಗಾಲ ಆರಂಭವಾದ ಮೇಲೆ ಈ ಬಡಾವಣೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗೆಳಿಗೆ ನೀರು ನುಗ್ಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ.

ಹದಗೆಟ್ಟ ರಸ್ತೆಯಲ್ಲಿ ತುಳಸಿ ವಿವಾಹ

ಇನ್ನು ತಗ್ಗು ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಈ ಮಾರ್ಗವಾಗಿ ಚಲಿಸುವಾಗ ಹಿರಿಯರು ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಈ ಬಗ್ಗೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಇತ್ತ ಗಮನ ಹರಿಸುತ್ತಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡರು.

ಇದನ್ನೂ ಓದಿ:ನೀರೊಳಗೆ ಕೇಕ್ ಕತ್ತರಿಸಿ ಕೊಹ್ಲಿಗೆ ಶುಭಾಶಯ ಕೋರಿದ ಸಬೀರ್ ತಂಡ

ABOUT THE AUTHOR

...view details