ಕರ್ನಾಟಕ

karnataka

ETV Bharat / state

ಧಾರವಾಡ: ಕೆಸಿಡಿ ಕಾಲೇಜಿನಲ್ಲಿ 'ತ್ರಿವಿಕ್ರಮ' ಸಿನಿಮಾ ಪ್ರಚಾರ

'ತ್ರಿವಿಕ್ರಮ' ಚಿತ್ರ ತಂಡ ಸಿನಿಮಾದ ಪ್ರಚಾರಕ್ಕಾಗಿ ಮಂಗಳವಾರ ಧಾರವಾಡಕ್ಕೆ ಬಂದಿತ್ತು. ಇಲ್ಲಿನ ಕೆಸಿಡಿ ಕಾಲೇಜಿನ ಯುವಕ ಯುವತಿಯರು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

By

Published : Jun 14, 2022, 7:40 PM IST

Promotion of Trivikrama Cinema in Dharwad
ಧಾರವಾಡದಲ್ಲಿ 'ತ್ರಿವಿಕ್ರಮ' ಸಿನಿಮಾ ಪ್ರಚಾರ

ಧಾರವಾಡ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ ರವಿಚಂದ್ರನ್ ನಟನೆಯ ಮೊದಲ ಚಿತ್ರ 'ತ್ರಿವಿಕ್ರಮ' ಪ್ರಮೋಶನ್​ಗಾಗಿ ಚಿತ್ರತಂಡ ಧಾರವಾಡದ ಕೆಸಿಡಿ ಕಾಲೇಜಿಗೆ ಆಗಮಿಸಿತ್ತು.


ಚಿತ್ರತಂಡವನ್ನು ಬರಮಾಡಿಕೊಂಡ ಕಾಲೇಜಿನ ಯುವಕ-ಯುವತಿಯರು ಹೊಸ ಚಿತ್ರಕ್ಕೆ ಶುಭ ಕೋರಿದರು. ಅಲ್ಲದೇ ವಿದ್ಯಾರ್ಥಿಗಳೆದುರು ನಟ ವಿಕ್ರಮ್ ನೃತ್ಯ ಮಾಡಿ ರಂಜಿಸಿದರು. ಇದೇ ತಿಂಗಳ 24ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಎಲ್ಲರೂ ಹಾರೈಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿರೋ ತ್ರಿವಿಕ್ರಮ ಚಿತ್ರ ತಂಡ

ಸಹನಾ ಮೂರ್ತಿ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ವಿಕ್ರಮ ರವಿಚಂದ್ರನ್​, ನಾಯಕಿಯಾಗಿ ಆಕಾಂಕ್ಷ ಶರ್ಮಾ ನಟಿಸಿದ್ದಾರೆ.

ABOUT THE AUTHOR

...view details