ಹುಬ್ಬಳ್ಳಿ :ಕರ್ತವ್ಯದಲ್ಲಿ ಸಮಯ ಪ್ರಜ್ಞೆ ತೋರಿದ ರೈಲ್ವೆ ಉದ್ಯೋಗಿಗಳಿಗೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರಿಂದು ರೈಲ್ ಸೌಧದ ಕಛೇರಿಯಲ್ಲಿ ನಡೆದ ಸುರಕ್ಷತಾ ಸಭೆಯಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ದಾವಣಗೆರೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿರುವ ಅನಿಲ್ ಕುಮಾರ್ ಸಿ.ಎಂ ಅವರು ಫೆಬ್ರವರಿ 12, 2023 ರಂದು ಕರ್ತವ್ಯದಲ್ಲಿದ್ದಾಗ ಗೂಡ್ಸ್ ರೈಲಿಗೆ ಸಿಗ್ನಲ್ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಬ್ರೇಕ್ ಬೈಂಡಿಂಗ್ ವೀಕ್ಷಿಸಿದ್ದಾರೆ. ತ್ವರಿತವಾಗಿ ಮಾಹಿತಿ ನೀಡಿದ ಪರಿಣಾಮ ಅಮರಾವತಿ ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಮಾಡುವ ಮೂಲಕ ಮುಂದಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದ ಭಾರಿ ಅನಾಹುತ ತಪ್ಪಿತ್ತು.
ಇದನ್ನೂ ಓದಿ :ನೈಋತ್ಯ ರೈಲ್ವೆ ಸಿಬ್ಬಂದಿಯಿಂದ ಬೆಂಗಳೂರು ಮೈಸೂರು ಮಾರ್ಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ..
ಕ್ಯಾಸಲ್ ರಾಕ್ನಲ್ಲಿ ಟೆಕ್ನಿಷಿಯನ್ ಆಗಿ ವಿಕಾಸ್ ಕುಮಾರ್ ಬರೋಡಿಯಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂದಿನಂತೆ ಗೂಡ್ಸ್ ರೈಲು ತಪಾಸಣೆ ರೋಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ರೈಲಿನ ವ್ಯಾಗನ್ನಲ್ಲಿ ಕರ್ಕಶ ಶಬ್ದ ಕೇಳಿದ ತಕ್ಷಣ ರೈಲು ನಿಲ್ಲಿಸಲು ಸೂಚಿಸಿದ್ದಾರೆ. ಇದರ ಪರಿಣಾಮ ತಾಂತ್ರಿಕ ತಂಡವು ಅಗತ್ಯ ಪರೀಕ್ಷೆ ನಡೆಸಿ ಮುಂದಾಗುವ ಸಂಭವನೀಯ ಅವಘಡ ತಪ್ಪಿಸಿದ್ದರು.