ಹುಬ್ಬಳ್ಳಿ : ನಾವು ಮೋದಿಯವರಿಗೆ ಪ್ರಶ್ನೆ ಮಾಡಿದಕ್ಕೆ ಕೇಸ್ ಹಾಕಿದ್ದಾರೆ. ಇದು ಯಾವ ನ್ಯಾಯ, ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡೋದೆ ತಪ್ಪಾ ? ಎಂದು ನಗರದಲ್ಲಿಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಸಿಟ್ಟು ಹೊರ ಹಾಕಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಪಾಟೀಲ್ ರಾಜ್ಯಕ್ಕೆ ಚಂದ್ರಯಾನ ವೀಕ್ಷಣೆ ಮಾಡಲು ಬರುತ್ತೀರಿ, ಪ್ರವಾಹ ವೀಕ್ಷಣೆಗೆ ಯಾಕೆ ಬರಲಿಲ್ಲವೆಂದು ಕೇಳಿದ್ದು ತಪ್ಪೆ? ಈ ಕಾರಣಕ್ಕೆ ಅವರನ್ನು ಬಂಧಿಸಿರುವುದು ಸರ್ವಾಧಿಕಾರಿ ನೀತಿ ಎಂದರು. ನಮ್ಮ ಯುವ ಮುಖಂಡರು ಕಾನೂನು ಬದ್ದವಾಗಿಯೇ ಬ್ಯಾನರ್ ಹಾಕಿ ಜನರ ಧ್ವನಿಯಾಗಿ ಪ್ರಶ್ನೆ ಮಾಡಿದ್ದರು ಅದರಲ್ಲಿ ಏನು ತಪ್ಪಿದೆಯೆಂದು ಕೇಳಿದ್ದಾರೆ.