ಕರ್ನಾಟಕ

karnataka

ETV Bharat / state

ಲಾಕ್​ಡೌನ್​ 'ಸಡಿಲಿಕೆ'ಯಿಂದಲೂ ಬರಬಹುದೇ ಸಂಕಷ್ಟ?...ಜಿಲ್ಲಾಡಳಿತದ ಆದೇಶಕ್ಕೆ ಕಂಗಾಲಾದ ವರ್ತಕರು - Lockdown relaxation at hubballi

ನಗರದ‌ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಸ್ಥಳವಾದ ದುರ್ಗದ ಬೈಲ್ ಯಾವ ವಲಯಕ್ಕೆ ಬರಲಿದೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಮಾಲೀಕರು ಅಂಗಡಿ ಬಾಗಿಲು ತೆರೆಯಲು‌ ಹಿಂದು ಮುಂದು ನೋಡುವಂತಾಗಿದೆ.

The merchants confused to the District administration
ಹುಬ್ಬಳ್ಳಿ ವರ್ತಕರೆಲ್ಲಾ ಅತಂತ್ರ

By

Published : May 11, 2020, 1:51 PM IST

ಹುಬ್ಬಳ್ಳಿ:ವಾಣಿಜ್ಯ ನಗರಿಯಲ್ಲಿ ಇಂದಿನಿಂದ‌ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಆದ್ರೆ ಜಿಲ್ಲಾಡಳಿತದ ಈ ಆದೇಶ ಕೆಲ ವ್ಯಾಪಾರಿಗಳನ್ನು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ.

ಜಿಲ್ಲಾಡಳಿತ ಆದೇಶದಂತೆ ಸೀಲ್​​ಡೌನ್​ ವಲಯದ ನೂರು ಮೀಟರ್ ಹಾಗೂ ಕಂಟೇನ್ಮೆಂಟ್​ ವಲಯದ ಒಂದು ಕಿಲೋ ‌ಮೀಟರ್​ವರೆಗೆ ನಿಷೇಧ ಹೇರಲಾಗಿದ್ದು, ಇದೀಗ ವರ್ತಕರಲ್ಲಿ ಗೊಂದಲ ಸೃಷ್ಟಿಸಿದೆ. ನಗರದ‌ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಸ್ಥಳವಾದ ದುರ್ಗದ ಬೈಲ್ ಯಾವ ವಲಯಕ್ಕೆ ಬರಲಿದೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಮಾಲೀಕರು ಅಂಗಡಿ ಬಾಗಿಲು ತೆರೆಯಲು‌ ಹಿಂದು ಮುಂದು ನೋಡುವಂತಾಗಿದೆ.

ಜಿಲ್ಲಾಡಳಿತದ ಆದೇಶಕ್ಕೆ ಕಂಗಾಲಾದ ವರ್ತಕರು

ಇಂದು ಬೆಳಗ್ಗೆಯೇ ತಮ್ಮ ತಮ್ಮ ಅಂಗಡಿ ಬಾಗಿಲು ತೆರೆಯಲು ಬಂದ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಸರಿಯಾದ ಮಾಹಿತಿ ‌ಇಲ್ಲದೇ ಹಾಗೂ ಜಿಲ್ಲಾಡಳಿತದ ಅಸ್ಪಷ್ಟವಾದ ಆದೇಶದಿಂದ ಅಂಗಡಿಕಾರರು ಬೇಸತ್ತು, ಸ್ಪಷ್ಟವಾದ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.

ABOUT THE AUTHOR

...view details