ಕರ್ನಾಟಕ

karnataka

ETV Bharat / state

ಅಧ್ಯಾಪಕ, ಪ್ರಗತಿಪರ ಚಿಂತಕ ಜೋಗುರ ನಿಧನ - The death of Jogura, a teacher and progressive thinker

ಸಮಾಜಶಾಸ್ತ್ರ ಅಧ್ಯಾಪಕ ಹಾಗೂ ಪ್ರಗತಿಪರ ಚಿಂತಕರಾಗಿದ್ದ ಸಾಹಿತಿ ಡಾ‌.ಎಸ್.ಬಿ.ಜೋಗುರು ನಿಧನರಾಗಿದ್ದಾರೆ.

ಜೋಗುರ ನಿಧನ

By

Published : Aug 29, 2019, 5:30 AM IST

ಧಾರವಾಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಅಧ್ಯಾಪಕ ಹಾಗೂ ಪ್ರಗತಿಪರ ಚಿಂತಕ, ಸಾಹಿತಿ ಡಾ‌.ಎಸ್.ಬಿ.ಜೋಗುರು (51) ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಜೋಗುರ ಅವರು ಅಧ್ಯಾಪಕರಾಗುವ ಮೊದಲು ಪತ್ರಕರ್ತರಾಗಿ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದರು. ಬಣ್ಣದ ಹನಿಗಳು, ನೀನ್ಯಾಕೋ ನಿನ್ನ ಹಂಗ್ಯಾಕೋ, ಇರದೇ ತೋರುವ ಬಗೆ ಸೇರಿದಂತೆ 70ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿಯವರಾಗಿದ್ದ ಜೋಗುರು ಅವರು, ಕಳೆದ ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿ, ಪ್ರಗತಿಪರ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದರು. ಗುರುವಾರ ಬೆಳಿಗ್ಗೆ 11 ಗಂಟೆಗೆ ಹೊಸ ಯಲ್ಲಾಪುರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ABOUT THE AUTHOR

...view details